Tuesday, June 21, 2011

ತುಳುನಾಡ ಮಂಜುನಾಥನ ಮುಂದೆ ರಾಜ್ಯದ ನಾಯಕರು



ಮಾತುಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ ಎಂಬ ಮಾತು ಪ್ರಚಲಿತದಲ್ಲಿದೆ. ತುಳುವರ ಪಾಲಿಗಂತೂ ಇದು ಪರಮ ಸತ್ಯವಾದ ಮಾತಾಗಿದೆ. ದೇವರನ್ನು ನಂಬುವ ಪ್ರತಿಯೊಬ್ಬರ ಮನೆಯಲ್ಲೂ ತಿರುಪತಿಯ `ದೇವೆರೆ ಗಂಟ್ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಕುಟುಂಬದ ಸದಸ್ಯರೊಳಗೆ ಎಂದಿಗೂ ಮಂಜುನಾಥನ ಅಥವಾ ಆತನ ಸನ್ನಿಧಿಯಾದ ಧರ್ಮಸ್ಥಳದ ಹೆಸರೆತ್ತಿ ಮಾತು ಹೇಳಬಾರದು ಎಂಬ ನಿಯಮವಿದೆ. ಹಾಗೊಂದು ಮಾತು ಬಂದು ಬಿಟ್ಟರೆ ಅಂದಿನಿಂದ ಆ ಮಾತಿನ ಇತ್ಯರ್ಥವಾಗುವವರೆಗೆ ಮಾತು ಯಾರು ಹೇಳಿದರೋ ಮತ್ತು ಯಾರ ಕುರಿತಾಗಿ ಹೇಳಿದರೋ ಅವರೊಂದಿಗಿನ ಸಂಬಂಧಕ್ಕೆ ತಡೆಯಾಗುತ್ತದೆ. ಈ ಎರಡು ವ್ಯಕ್ತಿಗಳ ಅಥವಾ ಕುಟುಂಬಗಳ ನಡುವೆ `ನುಪ್ಪು ನೀರ್ ಬಂದ್ ಆಗಿಬಿಡುತ್ತದೆ. ಪರಸ್ಪರ ಒಂದೇ ಪಂಕ್ತಿಯಲ್ಲಿ ಇವರು ಕುಳಿತು ಊಟ ಮಾಡುವಂತಿಲ್ಲ. ಒಬ್ಬರು ಇನ್ನೊಬ್ಬ ಮನೆಯ ಅನ್ನ ನೀರು ಮುಟ್ಟುವಂತೆಯೇ ಇಲ್ಲ.
ಹೆಚ್ಚಾಗಿ ಆಸ್ತಿ, ಭೂಮಿ, ಬೆಳೆ, ಫಲಗಳ ವಿಚಾದಲ್ಲಿ ಇಂತಹಾ ಆಜ-ಸೂಲಗಳನ್ನು ತುಳುವರು ಹಾಕಿಕೊಳ್ಳುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅಪವಾದವನ್ನು ಹಾಕಿದಾಗ ಅದು ಸುಳ್ಳು ಅಪವಾದವಾಗಿದ್ದರೆ ಅಪವಾದಕ್ಕೊಳಗಾದವನು ಮನನೊಂದು ಈ ಜಾಗದ ಹೆಸರು ಎತ್ತಿದರೆ ಸಾಕು ಅದೊಂದು `ಆಜ' ವಾಗಿಬಿಡುತ್ತದೆ. ಈ ಕಾರಣದಿಂದಾಗಿ ಕುಟುಂಬಗಳು ಒಡೆದು ಹೋಗುತ್ತವೆ. ಕೆಲವು ಹಿರಿಯರು ಮಾಡಿಕೊಂಡ ಇಂತಹಾ ಆಜ - ಸೂಲಗಳಿಂದ ಅವರ ನಂತರದ ತಲೆಮಾರುಗಳು ಕಷ್ಟ ನಷ್ಟವನ್ನು ಅನುಭವಿಸುತ್ತಾರೆ. ಈ `ಅಜ'ಕ್ಕೆ `ಪಿರಿಕಟ್ಟ್' ಮಾಡದೇ ಇದ್ದರೆ ಕುಟುಂಬಗಳ ಏಳಿಗೆಯೇ ಸಾಧ್ಯವಾಗದು ಎಂಬ ನಂಬಿಕೆ ತುಳುನಾಡಿನಲ್ಲಿ ಬಲವಾಗಿ ಬೇರೂರಿದೆ.
ಈ `ಆಜ-ಸೂಲ'ಗಳನ್ನು ಹಾಕಿ ಕೊಂಡವರು ಕೆಲವು ಸಮಯಗಳ ನಂತರ ಅದನ್ನು ಮರೆತು ಬಿಟ್ಟು ಮತ್ತೆ ಯಾವುದೋ ಸಂದರ್ಭದಲ್ಲಿ ಒಂದಾಗಿಬಿಡುವುದುಂಟು. ಆದರೆ ಅವರು ಮಾಡಿಕೊಂಡ ಆಜದ ದೋಷ ಅವರನ್ನು ಬಿಟ್ಟುಹೋಗುವುದಿಲ್ಲ. `ಮಾತು ಬಿಡ ಮಂಜುನಾಥ' ಎಂಬಂತೆ ಅವರಿಗೆ ಕೆಲವೊಂದು ದೋಷಗಳ ಅನುಭವವಾಗುತ್ತದೆ. ಈ ಬಗ್ಗೆ ಜ್ಯೋತಿಷ್ಯ, ಪ್ರಶ್ನೆ, ದೈವ ದರ್ಶನ ಮುಂತಾದ ಕಡೆ ಪರಿಮಾರ್ಜನೆಯನ್ನು ಕೇಳಿದಾಗ ಅವರು ಯಾವುದೋ ಕಾಲದಲ್ಲಿ ಹಾಕಿಕೊಂಡು ಮತ್ತೆ ಮರೆತುಬಿಟ್ಟ ಆಜ ಸೂಲದ ಬಗ್ಗೆ ನೆನಪು ಹುಟ್ಟುಸುವ ಪ್ರಮಾಣಗಳ ಕಂಡು ಬಂದು. ಕುಟುಂಬಗಳು ಮತ್ತೆ ಅದನ್ನು ನೆನಪಿಸಿಕೊಂಡಾಗ ಪ್ರಶ್ನೆಗಳು ಶ್ರೀಕ್ಷೇತ್ರಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರೆ ದೈವದರ್ಶನದಲ್ಲಿ `ಮೂಡಾಯಿ ರಾಜ್ಯದ `ಆಜ' ತೀರಿಸುವ ಬಗ್ಗೆ ಅಪ್ಪಣೆ ನೀಡುತ್ತವೆ. ಮತ್ತೆ ಯಾವ ಕಾರಣಕ್ಕೂ ಈ ಕ್ಷೇತ್ರದ ಹೆಸರೆತ್ತಿ ವಿವಾದ ಸೃಷ್ಟಿಸಬೇಡಿ ಎಂದು ಕಟ್ಟಪ್ಪಣೆ ನೀಡುತ್ತದೆ. ದೈವ ದೇವರನ್ನು ನಂಬುವ ತುಳುವರು ಈ ಅಪ್ಪಣೆಯನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಧರ್ಮಸ್ಥಳಕ್ಕೆ ಹೋಗಿ ಧಮರ್ಾಧಿಕಾರಿಗಳ ದರ್ಶನ ಮಾಡಿ `ಆಜ ಪಿರಿಪ್ಪುನ' ವಿಧಿ ವಿಧಾನಗಳನ್ನು ಕೈಗೊಂಡು ಧಮರ್ಾಧಿಕಾರಿಗಳು `ನಿಕ್ಲೆನ ಆಜ ಪರಿಹಾರ ಆಂಡ್. ನನ ದುಂಬುಗು ವ್ಯಾಜ್ಯ ಮಲ್ತೊನೊಡ್ಚಿ' ಎಂದು ದೇವರ ಎದುರು ಹೇಳಿ ಆಶೀರ್ವದಿಸಿ ಬುದ್ದಿ ಮಾತು ಹೇಳಿ, ದೇವರ ದರ್ಶನ ಮಾಡಿಕೊಂಡು ಹೋಗಿ ಸಮರಸದಿಂದ ಸುಖವಾಗಿ ಬಾಳುವಂತೆ ಅದೇಶಿಸಿ ಕಳುಹಿಸಿಕೊಡುತ್ತಾರೆ.
ಇದು ಇಂದು ನಿನ್ನೆಯ ಪರಿಪಾಠವಲ್ಲ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ ಮತ್ತು ನಂಬಿಕೆ. ಇದರಿಂದ ಮಾನಸಿಕವಾಗಿ ನೆಮ್ಮದಿಯನ್ನು ಪಡೆದುಕೊಂಡು ಕುಟುಂಬಗಳು ಮತ್ತೆ ಒಗ್ಗಟ್ಟಾಗಿ ತಮ್ಮ ತಮ್ಮ ಏಳಿಗೆಯನ್ನು ಕಂಡು ಕೊಳ್ಳುತ್ತವೆ. ವಾದ, ವಿವಾದ, ವ್ಯಾಜ್ಯ, ಜಗಳ ಇವೆಲ್ಲವುಗಳನ್ನು ಪೂರ್ವಜರಿಂದ ಬಳುವಳಿಯಾಗಿ ಪಡೆದುಕೊಂಡ ಕೆಲವು ಕುಟುಂಬಗಳು ಮತ್ತೆ ಮತ್ತೆ `ಆಜ -ಸೂಲ' ಗಳಿಗೆ ಒಳಗಾಗಿ ಅದನ್ನು ಪರಿಹರಿಸುವ ಚಾಳಿಯನ್ನು ಪ್ರದಶರ್ಿಸುವುದೂ ಉಂಟು. ಇಂತಹಾ ಕುಟುಂಬಗಳು ಅಧಃಪತನದತ್ತ ಸಾಗುತ್ತವೆ.
ತುಳುನಾಡಿನಲ್ಲಿ ಇಂತಹಾ ಸಂಪ್ರದಾಯವಿದ್ದರೆ ಕನರ್ಾಟಕದ ವಿವಿಧ ಭಾಗಗಳಲ್ಲಿ ಧರ್ಮಸ್ಥಳದ ಬಗ್ಗೆ ವಿಧ ವಿಧವಾದ ನಂಬಿಕೆಗಳಿವೆ. ಮಂಜುನಾಥ ಜಗದ್ವ್ಯಾಪಿ. ಈತನ ಹೆಸರಿನಲ್ಲಿ ನ್ಯಾಯ ನೀಡುವ ಧರ್ಮಸ್ಥಳವೂ ವಿಶ್ವವಿಖ್ಯಾತವಾಗಿದೆ. ಈ ಮಂಜುನಾಥನ ಪುಣ್ಯ ಕ್ಷೇತ್ರ ತುಳುನಾಡಿನಲ್ಲಿರುವುದು ತುಳುವರಿಗೆ ಹೆಮ್ಮೆಯ ವಿಚಾರವಾಗಿದೆ.
ಈ ಕ್ಷೇತ್ರದ ಆಜ-ಸೂಲ ಅಂದರೆ ಆಣೆ -ಪ್ರಮಾಣದ ವಿಚಾರವು ಈಗ ನಮ್ಮ ರಾಜ್ಯದ ರಾಜಕೀಯದ ವಲಯದಲ್ಲಿ ಪ್ರಮುಖ ಸುದ್ದಿಯಾಗಿಬಿಟ್ಟಿದೆ. ಮುಖ್ಯ ಮಂತ್ರಿ ಯಡಿಯೂಪ್ಪ ಮತ್ತು ಮಾಜೀ ಮುಖ್ಯಮಂತ್ರಿ ಈಗ ಈ ಕ್ಷೇತ್ರದ ಹೆಸರೆತ್ತಿ ಆಣೆ ಮಾಡಿಕೊಂಡು ಬಿಟ್ಟಿದ್ದಾರೆ. ಕ್ಷೇತ್ರವನ್ನು ಸಂದಶರ್ಿಸಿ ದೇವರ ಮುಂದೆ ಪರಿಹಾರ ಕೇಳುವುದೇ ಇದಕ್ಕೆ ಇರುವ ಪರಿಹಾರವಾಗಿದ್ದು ಬೇರೆ ಯಾವ ವಿಧಾನದಿಂದಲೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಮತ್ತು ದೇಶಾದ್ಯಂತ ಇವರಿಬ್ಬರ ನಡುವಿನ ಆಣೆ-ಪ್ರಮಾಣ ವಿವಾದವು ವಿವಿಧ ಊಹಾಪೋಹಗಳಿಗೆ ಎಡೆ ಮಾಡಿದ್ದರೂ ಇದು ಇವರ ವೈಯುಕ್ತಕ ವಿಚಾರವಾಗಿದೆ. ಇದಕ್ಕೂ ರಾಜ್ಯ ರಾಜಕಾರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ರಾಜ್ಯ ಸಂವಿಧಾನಬದ್ದವಾಗಿ ನಡೆದರೆ ಇವರ ವಾದ ವಿವಾದಗಳ ಪರಿಹಾರವು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ಇವರಿಬ್ಬರೂ ಒಂದಾಗಿ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಪರಸ್ಪರ ತಪ್ಪುಗಳನ್ನು ತಿದ್ದಿಕೊಂಡು ಇನ್ನು ಮುಂದೆ ಇಂತಹಾ ಆಣೆ - ಪ್ರಮಾಣಗಳಿಗೆ ಎಡೆ ಮಾಡುವಂತಹಾ ಹಗರಣಗಳನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿಕೊಳ್ಳುವ ಅಗತ್ಯವಿದೆ.
ಧಮರ್ಾಧಿಕಾರಿಗಳು ಎಲ್ಲಾ ವೈಮನಸ್ಸುಗಳನ್ನು ಮಂಜುನಾಥನ ಸನ್ನಿಧಿಯಲ್ಲೇ ಬಿಟ್ಟು ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಎಂಬ ಬುದ್ದಿಯ ಮಾತುಗಳನ್ನು ಹೇಳುತ್ತಾರೆ. ಅದನ್ನು ಈರ್ವರೂ ಚಾಚೂ ತಪ್ಪದೆ ಪಾಲಿಸುತ್ತಾರೆ ಎಂಬ ಅಪೇಕ್ಷೆ ಮಂಜುನಾಥನನ್ನು ಮೈಮನಗಳಲ್ಲಿ ತುಂಬಿಕೊಂಡ ತುಳುವರದ್ದಾಗಿದೆ.

Tuesday, May 31, 2011

ಎಲ್ಲವೂ ಅಸಲಿ; `ಅಪ್ಪೆ', `ದೈವ' ನಕಲಿ



ನಮ್ಮ ನಗರದ ಪ್ರತಿಷ್ಠಿತ ಜ್ಯೋತಿ ಚಿತ್ರಮಂದಿರದಲ್ಲಿ ಈಗ ಕಿಕ್ಕಿರಿದ ಜನಸಂದಣಿ. ಚಿತ್ರಮಂದಿರದ ಮೂಲಗಳು ಹೇಳುವಂತೆ ಕಳೆದ ವರ್ಷ ಬಂದ ವಿಷ್ಣುವರ್ಧನ್ರವರ ಆಪ್ತರಕ್ಷಕ ಚಿತ್ರದ ಬಳಿಕ ಚಿತ್ರಮಂದಿರದ ಮುಂದಿನ ಸಾಲಿನ ಸೀಟಿನ ಮೇಲೆ ಭಾರ ಬಿದ್ದದ್ದು ಮೊನ್ನೆ ಅಸಲ್ ಚಿತ್ರ ಬಿಡುಗಡೆಯಾದ ನಂತರ. ಟಿವಿ ಮುಂತಾದ ಮನರಂಜನೆಗಳು ವ್ಯಾಪಕವಾಗುವ ಮುನ್ನ ಸಿನಿಮಾ ಮಂದಿರಗಳು ತಮ್ಮ ದೌಲತ್ತನ್ನು ಪ್ರದಶರ್ಿಸುತ್ತಿದ್ದವು. ಟಿಕೇಟಿಗಾಗಿ ಹನುಮಂತನ ಬಾಲದಂತಹಾ ಸಾಲು. ನೂಕು ನುಗ್ಗಾಟ, ಗಲಾಟೆ, ಗಲಭೆಯನ್ನು ನಿಯಂತ್ರಿಸಲು ಪೊಲೀಸರ ಆಗಮನ, ಟಿಕೇಟನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುವ ಬ್ಲ್ಯಾಕ್ಟಿಕೇಟ್ ದಂಧೆ ಇತ್ಯಾದಿಗಳು ಆಗೆಲ್ಲಾ ಸಾಮಾನ್ಯವಾಗುತ್ತಿದ್ದವು. ಬರಬರುತ್ತಾ ನಮ್ಮ ತುಳುನಾಡಿನ ಚಿತ್ರ ಮಂದಿರಗಳಲ್ಲಿ ಹೊರರಾಜ್ಯದ ಪ್ರೇಕ್ಷಕರೇ ಜಾಸ್ತಿಯಾಗತೊಡಗಿದರು. ತುಳು ಮಾತನಾಡುವ ಮಂದಿ ಕನ್ನಡ ಸಿನೆಮಾಗಳ ವೀಕ್ಷಕರಾಗಿ ಹೋಗುವುದು ಬಹಳಷ್ಟು ಕಡಿಮೆಯಾಗತೊಡಗಿತು.
ಈಗ ಜ್ಯೋತಿ ಚಿತ್ರ ಮಂದಿರಕ್ಕೆ ಹೋದರೆ ನಮಗೆ ಆ ದಿನಗಳ ನೆನಪಾಗುತ್ತದೆ. ಎಲ್ಲಿ ನೋಡಿದರೂ ತುಳು ಬಿಟ್ಟು ಬೇರೆ ಭಾಷೆ ಮಾತನಾಡುವವರೇ ಇಲ್ಲ. ಅಂಕುಡೊಂಕು ಸಾಲು, ಪೊಲೀಸರ ಖಾಕಿ ಡ್ರೆಸ್ಸು, ಅಲ್ಲಲ್ಲಿ ನಾಲ್ಕೈದು ಪಟ್ಟು ಹೆಚ್ಚು ದುಡ್ಡಿಗೆ ಟಿಕೇಟ್ ಮಾರಾಟ ಮಾಡುವವರು. ಟಿಕೇಟೆಲ್ಲಾ ಖಾಲಿಯಾಗಿ `ಹೌಸ್ಫುಲ್' ಬೋಡರ್ು ಚಿತ್ರ ಮಂದಿರದ ಬಾಗಿಲಲ್ಲಿ ಕಾಣಿಸಿಕೊಂಡಾಗ ಸಹನೆಗೆಟ್ಟು ಕೂಗಾಡುವ ಗಟ್ಟಿ ಮಾಂಸಖಂಡದ ಹುಡುಗರು. ಬೇಸರದಿಂದ ಚಿತ್ರಮಂದಿರದ ಆವರಣದಿಂದ ಹೊರಗೆ ಬಂದು ತಮ್ಮ ತಮ್ಮ ಪಾಡಿಗೆ ಹೋಗುವ ಮಂದಿ...
ಹೌದು ವಿಜಯಕುಮಾರ್ ಕೊಡಿಯಾಲ್ ಬೈಲ್ರವರ `ಒರಿಯದರ್ೊರಿ ಅಸಲ್' ತುಳು ಚಿತ್ರ ತುಳುನಾಡಿನಲ್ಲೇ ಒಂದು ಇತಿಹಾಸವನ್ನು ಬರೆದಿದೆ. ತುಳುನಾಡಿನಾದ್ಯಂತ ಈ ಚಿತ್ರದ ಪರವಾದ ಒಂದು ಅಲೆಯನ್ನು ನಿಮರ್ಾಣ ಮಾಡಿದೆ. ಈ ಚಿತ್ರವನ್ನು ಒಂದು ಬಾರಿ ನೋಡಬೇಕು ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಈ ಚಿತ್ರವನ್ನು ನೋಡಲೆಂದೇ ದುಬಾಯಿಯಿಂದ, ಮುಂಬಾಯಿಯಿಂದ ಬಂದವರಿದ್ದಾರೆ. ದೂರದ ಊರುಗಳಿಗೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಇನ್ನೂ ಕೂಡಾ ಚಿತ್ರ ನೋಡಲು ಅವಕಾಶ ಸಿಗದವರೂ ಇದ್ದಾರೆ. ಆಧುನಿಕ ಮನರಂಜನೆಗಳು ಸಾಕಷ್ಟು ಇರುವ ಈ ಕಾಲದಲ್ಲಿ ತುಳು ಚಿತ್ರವೊಂದು ಪ್ರೇಕ್ಷಕರನ್ನು ಚಿತ್ರ ಮಂದಿರಕ್ಕೆ ಕೈ ಬೀಸಿ ಕರೆಯುತ್ತಿರುವುದು ಒಂದು ವಿಸ್ಮಯವೇ ಸರಿ.
ತುಳುವರಿಗೆ ಸ್ಯಾಂಡಲ್ವುಡ್, ಬಾಲಿವುಡ್ ಗುಣಮಟ್ಟದ ಚಿತ್ರವೊಂದನ್ನು ನಿಮರ್ಿಸಲು ಸಾಧ್ಯವಿಲ್ಲ ಎಂಬ ಕೀಳರಿಮೆಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ರವರು ಮಂಗಳ ಹಾಡಿದ್ದಾರೆ. ತುಳು ಚಿತ್ರಕ್ಕೆ ಪ್ರೇಕ್ಷಕರು ಸಹಕಾರ ನೀಡುವುದಿಲ್ಲ ಎಂಬುದನ್ನೂ ತುಳುನಾಡಿನ ಪ್ರೇಕ್ಷಕರು ಹುಸಿಗೊಳಿಸಿದ್ದಾರೆ. ತುಳು ಚಿತ್ರರಂಗದ ಅಂಕುಡೊಂಕಿನ ರಸ್ತೆಯ ಅಂತಿಮ ಮೈಲಿಗಲ್ಲು ಇದು. ಮುಂದಿದೆ ನೇರ ಸಮತಟ್ಟಿನ ದಾರಿ.
ಈ ಚಿತ್ರ ಕೇವಲ ಹಾಸ್ಯದ ಕಾರಣದಿಂದಲೇ ಜನರ ಮನವನ್ನು ಸೆಳೆದಿದೆ ಎಂದರೆ ತಪ್ಪಾಗುತ್ತದೆ. ಮಧ್ಯಂತರದ ನಂತರ ಕತೆ ವಿಭಿನ್ನವಾಗಿ ಮೂಡಿ ಬಂದಿದೆ. ನಾಟಕದ ಒರಿಯದರ್ೊರಿ ಅಸಲ್ನಂತೆ ಚಿತ್ರ ಸಾಗುತ್ತದೆ ಎಂದು ಭಾವಿಸಿದವರಿಗೆ ತಾವು ತಪ್ಪಾಗಿ ಭಾವಿಸಿದ್ದೇವೆ ಎಂಬ ಭಾವನೆ ಮೂಡುತ್ತದೆ. ತುಳುನಾಡಿನ ನೆಲ-ಜಲದ ಉಳಿವಿಗಾಗಿ ಅತೀ ಅಗತ್ಯವಾಗಿ ಬೇಕಾದ ಉತ್ತಮ ಸಂದೇಶವೂ ಈ ಚಿತ್ರದಲ್ಲಿ ಅಡಗಿದೆ. ಈ ಚಿತ್ರದ ಕತೆಯನ್ನು ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿ ಕಂಡು ಬರುವ ಒಂದು ಸಾಲಿನ ಕತೆಯಂತೆ ಹೇಳಿಬಿಡುಬಹುದು ಆದರೆ ಈ ಒಂದು ಸಾಲು ಚಿತ್ರಕತೆ ಎಂಬ ಪ್ರಾಣವಾಯುವಿನ ಸುತ್ತ ಹೆಣೆಯಲಾದ ಸುಂದರ ಶರೀರ ಮನಮುಟ್ಟುತ್ತದೆ.
ಹಾಗಾದರೆ ಈ ಚಿತ್ರದಲ್ಲಿ ಋಣಾತ್ಮಕವಾದ ಅಂಶಗಳು ಇಲ್ಲವೇ? ಇದೆ. ಖಂಡಿತವಾಗಿಯೂ ಇದೆ. ಅವುಗಳಲ್ಲಿ ಮುಖ್ಯವಾಗಿ ನಮ್ಮ ಚಿತ್ರಕ್ಕೊಂದು ಅಸಲಿ `ಅಪ್ಪೆ'ಯನ್ನು ಕೊಡಲು ವಿಜಯಣ್ಣ ವಿಫಲರಾಗಿದ್ದಾರೆ. ಖಡಕ್ ತುಳು ಮಾತನಾಡಿ ಮನಗೆಲ್ಲಬೇಕಾಗಿದ್ದ `ಅಪ್ಪೆ'ಯನ್ನು ಮುಂಬಾಯಿಯಿಂದ ಕರೆತಂದಂತಾಗಿದೆ. ಇಲ್ಲಿ ಕಾಪರ್ೋರೇಟರ್ ಕಾಂತಪ್ಪಣ್ಣನ ಹೆಂಡತಿ ಸ್ಟೈಲಾಗಿ ತುಳುವನ್ನು ಎಳೆದೆಳೆದು ಮಾತನಾಡುವುದನ್ನು ಸಹಿಸಿಕೊಳ್ಳಬಹುದಾಗಿದೆ. ನಾಯಕಿಯೂ ಆಧುನಿಕತೆಯ ಪ್ರಭಾವದಿಂದ ಮಾಡನರ್್ ತುಳು ಮಾತನಾಡುವುದನ್ನು ಒಪ್ಪಿಕೊಳ್ಳಬಹುದಾಗಿದೆ. ಆದರೆ ತುಳುನಾಡಿನ ಅಪ್ಪೆಗೆ ಸರಿಯಾಗಿ ತುಳು ಮಾತನಾಡಲು ಬಾರದೇ ಇರುವುದು ಒಂದು ಪ್ರಮುಖ ಕಪ್ಪು ಚುಕ್ಕೆಯಾಗಿದೆ. ಇದು ಒಂದು ಋಣಾತ್ಮಕ ಅಂಶವಾದರೆ ಇನ್ನೊಂದು ತುಳುನಾಡಿನ ಸಂಸ್ಕೃತಿಯ ದೃಷ್ಟಿಯಿಂದ ಬಹಳ ಮುಖ್ಯವೂ ಇನ್ನು ಮುಂದೆ ಸಿನಿಮಾ, ದೃಷ್ಯ ಮಾಧ್ಯಮಗಳಲ್ಲಿ ನಮ್ಮ ಸಂಸ್ಕೃತಿಯನ್ನು ದಾಖಲಿಸುವಾಗ ಬಹಳಷ್ಟು ಜಾಗರೂಕತೆ ವಹಿಸಬೇಕಾದ ವಿಚಾರವೂ ಆಗಿದೆ. ಭೂತಾರಾಧನೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಸಿನಿಮಾದಲ್ಲಿ ತೋರಿಸುವಾಗ ಆಭಾಸವಾಗಿದೆ. ದೈವಪಾತ್ರಿಯ ಧ್ವನಿಯಂತೂ ಅಪಹಾಸ್ಯಕ್ಕೊಳಗಾದಂತಾಗಿದೆ. ನಾಟಕದಲ್ಲಿ ಇಂತಹುಗಳನ್ನು ಸಹಿಸಿಕೊಳ್ಳಬಹುದಾದರೂ ಸಿನಿಮಾದಲ್ಲಿ ಸಾಧ್ಯವಿಲ್ಲ. ಈ ದೃಷ್ಯವನ್ನು ಗಂಭೀರತೆಯೊಂದಿಗೆ ಅಳವಡಿಸಿಕೊಂಡಿದ್ದರೆ ಬಹುಶಃ ಇದೊಂದು ಚಿನ್ನದ ಗರಿಯಾಗುತ್ತಿತ್ತು. ಇಲ್ಲಿ ಬಸಪ್ಪಣ್ಣ ಮದ್ಯಪಾನ ವ್ಯಸನಿಯ ಸಂಕೇತವಾಗಿದ್ದರೆ, ದೈವ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರಬೇಕಾಗಿತ್ತು.
ಇವೆರಡಲು ಋಣಾತ್ಮಕ ಅಂಶಗಳನ್ನು ಬಿಟ್ಟರೆ ಉಳಿದ ಯಾವುದೇ ಹೇಳಿಕೊಳ್ಳುವಂತಹಾ ಹಿನ್ನಡೆಗಳು ಅಸಲಿಗಿಲ್ಲ. ಖಂಡಿತವಾಗಿಯೂ ಈ ಚಿತ್ರ ಎಲ್ಲಾ ರೀತಿಯಿಂದಲೂ ಸೂಪರ್ರಾಗಿದೆ. ಪ್ರತಿಯೋರ್ವರು ಸಂಸಾರ ಸಮೇತವಾಗಿ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವುದು ತುಳುವರ ಕರ್ತವ್ಯವಾಗಿದೆ.

Monday, May 30, 2011

ತುಳುವರ ಪವಿತ್ರ `ಐನ್ ಪಣವು'ಗೆ ವಿದಾಯ



ನಾಲ್ಕಾಣೆಯ ಚಲಾ ವಣೆಯನ್ನು ಹಿಂತೆಗತದಿಂದ ತುಳುವರ `ನಾಲ್ಕಾಣೆ' ಕಾಣೆಯಾಗಿದೆ. ಈ ನಾಲ್ಕಾಣೆ ಇಲ್ಲದೇ ಹೋದ ಕಾರಣದಿಂದ ತುಳುವರು ತಾವು ಧಾಮರ್ಿಕ ಕಾರ್ಯಕ್ರಮಗಳಲ್ಲಿ ಅತಿ ಶ್ರದ್ದೆಯಿಂದ ಚಲಾಯಿಸುತ್ತಿದ್ದ `ಐನ್ ಪಣವಿ'ಗೆ ವಿದಾಯ ಹೇಳಬೇಕಾಗಿ ಬಂದಿದೆ.
ಒಂದು ಆಣೆ ಎಂದರೆ ಆರೂ ಕಾಲು ಪೈಸೆ ಎಂದು ಲೆಕ್ಕ ಹಾಕುತ್ತಿದ್ದ ತುಳುವರು ಇಂತಹಾ ನಾಲ್ಕು ಆಣೆಯನ್ನು ಸೇರಿಸಿ `ನಾಲ್ಕಾಣೆ' ಅಂದರೆ ಇಪ್ಪತ್ತೈದು ಪೈಸೆ ಎಂದು ಹೇಳುತ್ತಿದ್ದರು. ಇದೇ ರೀತಿ `ಎಣ್ಮಾಣೆ' ಅಂದರೆ ಐವತ್ತು ಪೈಸೆ ಮತ್ತು `ಪದ್ರಡಾಣೆ' ಅಂದರೆ ಎಪ್ಪತ್ತೈದು ಪೈಸೆ ಎಂದು ಹೇಳುತ್ತಿದ್ದರು ಒಂದು ರೂಪಾಯಿಯ ನಂತರ ಬರುವುದೇ `ಐನ್ ಪಣವು' ಅಂದರೆ ಐದು ನಾಲ್ಕಾಣೆಗಳು ಸೇರಿದ ಒಂದೂಕಾಲು ರೂಪಾಯಿ ತುಳುವರ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಅತೀ ಪವಿತ್ರ.
ತುಳುನಾಡಿನಲ್ಲಿ ಯಾವುದೇ ಧಾಮರ್ಿಕ ಕಾರ್ಯಕ್ರಮಗಳಲ್ಲೂ ಐನ್ ಪಣವು ಕಾಣಿಕೆಯನ್ನು ಇಡಲಾಗುತ್ತದೆ. ಒಂದು ಕಾಲದಲ್ಲಿ ಇದು ಗರಿಷ್ಠವಾಗಿದ್ದು ಈ ಕಾಲದಲ್ಲಿ ಇದು ಕನಿಷ್ಠವಾಗಿರಬಹುದು. ಆದರೆ ಈ ಐನ್ಪಣವು ಧಾಮರ್ಿಕವಾಗಿ ಸ್ವೀಕೃತವಾಗಿತ್ತು. ಧಾಮರ್ಿಕ ಕಾರ್ಯಕ್ರಮದ ಕೊನೆಯ ಭಾಗವಾಗಿ ಬ್ರಹ್ಮಾರ್ಪಣೆ `ಐನ್ ಪಣವಿ'ಗೆ ಹೂ ನೀರು ಹಾಕಿ ಬಿಡಬೇಕೆಂಬ ನಿಯಮವಿತ್ತು. ಇತ್ತೀಚೆಗೆ ಇದು ಐದು ಹತ್ತು ರೂಪಾಯಿಗಳಿಗೇರಿದ್ದರೂ ಒಂದೂ ಕಾಲು ರೂಪಾಯಿಯೇ ಪವಿತ್ರವಾದದ್ದು ಎಂಬ ಭಾವನೆ ಇತ್ತು.
ಪುರೋಹಿತರಿಗೆ ಕಾಣಿಕೆ, ತಾಂಬೂಲ ಇತ್ಯಾದಿಗಳನ್ನು ಕೊಡುವಾಗಲೂ ಎಷ್ಟೇ ದೊಡ್ಡ ಸಂಭಾವನೆಯ ನೋಟುಗಳನ್ನು ಇಟ್ಟರೂ ಅದರ ಜತೆಗೆ `ಐನ್ಪಣವು' ಇಟ್ಟರೇನೇ ಅದು ಸಾರ್ಥಕ ಎಂದು ಭಾವಿಸಲಾಗುತ್ತಿತ್ತು. ಡೊನೇಶನ್ ಇತ್ಯಾದಿಗಳನ್ನು ಕೊಡುವಾಗ ಕೊನೆಯಲ್ಲಿ ಸೊನ್ನೆ ಬರಬಾರದು ಎಂದು ಒಂದು ರೂಪಾಯಿ ಹೆಚ್ಚಾಗಿ ಕೊಡುವ ಕ್ರಮವೂ ಇದೇ ಆಧಾರದಲ್ಲಿ ಬಂದಿರಬೇಕು. ಒಂದು ಕಾಲು ಅಂದರೆ ಒಂದು ರೂಪಾಯಿ ಇಪ್ಪತೈದು ಪೈಸೆ ಅಂದರೆ ಕೊನೆಯ ಅಂಕೆ ಐದು ಆಗಿರುವುದರಿಂದಲೂ ಇದು ಮಂಗಲಕರವಾದದ್ದು ಎಂದು ಭಾವಿಸಲಾಗುತ್ತಿತ್ತು.
ಇನ್ನು ಮಂದಕ್ಕೆ ಮಂಗಲಕರ ಎಂದು ಭಾವಿಸಲಾಗಿದ್ದ ಈ ಸಂಖ್ಯೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ನಾಲ್ಕಾಣೆಯ ನಾಣ್ಯ ಮಾಯವಾಗಿಬಿಟ್ಟಿದೆ. ಜನರು ಆಥರ್ಿಕವಾಗಿ ಅಪಾರವಾದ ಅಭಿವೃದ್ಧಿ ಹೊಂದಿದ ಪರಿಣಾಮ ಬಹುಮುಖ್ಯವಾದ ಧಾಮರ್ಿಕ ಭಾವನೆಯೊಂದಕ್ಕೆ ಧಕ್ಕೆ ಬಂದೊದಗಿದೆ.
ಹಿಂದಿನ ಕಾಲದ ರುಯಿ, ಮುಕ್ಕಾಲು ಇತ್ಯಾದಿ ಲೆಕ್ಕದ ವಿಚಾರಗಳನ್ನು ಈಗ ಅರುವತ್ತು ವರ್ಷ ದಾಟಿದವರ ಬಾಯಲ್ಲಿ ಕೇಳಬಹುದಾಗಿದೆ. ಈಗ ಯುವಾವಸ್ಥೆಯನ್ನು ದಾಟುತ್ತಿರುವವರ ಬಾಲ್ಯದಲ್ಲಿ ರುಯಿ, ಮುಕ್ಕಾಲುಗಳು ಹಾಸ್ಯದ ಮತ್ತು ತಮಾಷೆ ಮಾಡುವ ನಾಣ್ಯಗಳಾಗಿದ್ದವು. ಇವರ ಬಾಲ್ಯ ಕಾಲದಲ್ಲಿ ಪೈಸೆಗಳದ್ದೇ ಕಾರುಬಾರು. ಇಂತಹಾ ಒಂದು ಪೈಸೆ, ಮೂರು ಪೈಸೆ, ಐದು ಪೈಸೆಗಳ ಚಲಾವಣೆ ಹಿಂತೆಗೆದುಕೊಳ್ಳುತ್ತದೆ ಎಂದು ಆ ಕಾಲದಲ್ಲಿ ಸುದ್ದಿಯಾದಾಗ ಈ ಪೈಸೆಗಳೆಲ್ಲಾ ಮಕ್ಕಳ ಕೈಗೆ ಸೇರಿ ಐಸ್ ಕ್ಯಾಂಡಿಯವನ ಡಬ್ಬ ಸೇರಿತ್ತು. ಹತ್ತು ಪೈಸೆ ಚಲಾವಣೆ ನಿಂತು ಹೋದದ್ದು ಇತ್ತೀಚಿನ ದಿನಗಳಲ್ಲಿ. ಹತ್ತು ಪೈಸೆ ಮತ್ತು ಅದರ ಕೆಳಗಿನ ಮೌಲ್ಯದ ನಾಣ್ಯಗಳು ನಾಣ್ಯ ಸಂಗ್ರಾಹಕರ ಬಳಿಯಲ್ಲಿ ನಾವೀಗ ಕಾಣಬಹುದಾಗಿದೆ. ನಾಲ್ಕಾಣೆಯ ಪಾವಲಿಗಳೂ ಅದೇ ದಾರಿಯನ್ನು ಹಿಡಿದಿದೆ. ಇನ್ನು ಮುಂದಿನ ಸರದಿ ಎಂಟಾಣೆ ಅಂದರೆ ಐವತ್ತು ಪೈಸೆಯದ್ದು. ಆದರೆ ಈ ನಾಣ್ಯ ನಾಲ್ಕಾಣೆಯಂತೆ ಧಾಮರ್ಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಾಮ ಬೀರದು.

Monday, September 13, 2010

ತುಳುವರ ಸರಳ ಗಣಪ



ಚೌತಿ ಹಬ್ಬ ತುಳುನಾಡಿನ ಮನೆ ಮನೆಯ ಹಬ್ಬವಾಗಿದೆ. ತುಳುವರು ಆರಾಧಿಸುವ ದೈವಗಳು ಚೌತಿ ಹಬ್ಬವನ್ನು ಆಚರಿಸದೇ ಇದ್ದರೆ ಸಹಿಸುವುದಿಲ್ಲ. ಗುತ್ತಿನ ಮನೆ, ದೈವದ ಮನೆ, ದೈವಸ್ಥಾನಗಳಲ್ಲಿ ಚೌತಿ ಹಬ್ಬವನ್ನು ಖಡ್ಡಾಯವಾಗಿ ಆಚರಿಸಬೇಕು. ಕೆಲವೊಂದು ಕಡೆ ಚೌತಿ ದಿನ ಗಣಪತಿ ಪೂಜೆ ಮಾಡಲು ಕಾರಣಾಂತರಗಳಿಂದ ಅಸಾಧ್ಯವಾದರೆ ಮುಂದೊಂದು ದಿನ ಚೌತಿಹಬ್ಬ ಎಂದು ದಿನ ನಿಗದಿ ಮಾಡಿ ಗಣಪತಿಯನ್ನು ಆರಾಧಿಸಲೇ ಬೇಕು. ದೈವಗಳಿಗೆ ಈಶ್ವರನು ಯಜಮಾನನಾದುದರಿಂದ ಗಣಪತಿಗೂ ಮಾನ್ಯತೆ ಬರುತ್ತದೆ.
ಇಲ್ಲಿನ ಮನೆ ಮನೆಗಳಲ್ಲಿ ಚೌತಿಯ ಗಣಪತಿಯನ್ನು ಮೂತರ್ಿಯ ಮೂಲಕ ಆರಾಧಿಸುವುದು ಬಹಳ ಕಡಿಮೆ. ಈಗೀಗ ಗಣಪತಿ ಮೂತರ್ಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕ್ರಮ ಕೆಲವು ಮನೆಗಳಲ್ಲಿ ಇದ್ದರೂ ವಾಸ್ತವವಾಗಿ ತುಳುವರು ಎಂದು ಕರೆಯಲ್ಪಡುವವರು ಗಣಪತಿಯ ಮೂತರ್ಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರಲಿಲ್ಲ. ಅವರದೇನಿದ್ದರೂ ಕೃಷಿ ಪರಿಕರಗಳ ಹಿನ್ನೆಲೆಯುಳ್ಳ ಸರಳವಾದ ಗಣಪತಿಯ ಆಚರಣೆ.
ಬತ್ತದಂತೆ ಕಬ್ಬುಕೂಡಾ ತುಳುನಾಡಿನ ಪ್ರಮುಖ ಬೆಳೆಯಾಗಿತ್ತು. ಚೌತಿಯ ದಿನ ಕಬ್ಬನ್ನು ಮನೆಯೊಳಗೆ ತಂದಿಟ್ಟರೆ ಆ ದಿನ ಗಣಪ ಮನೆಗೆ ಬಂದೇ ಬರುತ್ತಾನೆ ಎಂದು ತುಳುವರು ನಂಬುತ್ತಾರೆ. ಯಾಕೆಂದರೆ ಗಣಪ ಕಬ್ಬುಪ್ರಿಯ. ಒಂದು ತುಂಡು ಕಬ್ಬು ಮನೆಯೊಳಗೆ ತಂದು ಚೌತಿ ಆಚರಿಸಿದ ಸಮಾಧಾನ ಪಟ್ಟುಕೊಳ್ಳುವವರೂ ಇದ್ದಾರೆ. ಆದುದರಿಂದ ತುಳುವರ ಮನೆಯೊಳಗೆ ಅಂದು ಕಬ್ಬು ಬಂದೇ ಬರಬೇಕು. ಇಲ್ಲಿನ ಸಂತೆಗಳಲ್ಲಿ ಚೌತಿಯ ಮುಂಚಿನ ದಿನಗಳಲ್ಲಿ ಕಬ್ಬಿನ ಮಾರಾಟ ಭರಾಟೆಯಿಂದ ನಡೆಯುತ್ತದೆ. ಎಲ್ಲಿ ನೋಡಿದರೂ ಕಬ್ಬಿನ ಕಟ್ಟಗಳ ಸಾಲುಗಳು ಕಂಡು ಬರುತ್ತವೆ. ಕಬ್ಬು ಬೆಳೆಸುವ ರೈತರು ಈ ದಿನ ಕಬ್ಬನ್ನು ನೇರವಾಗಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ.
ಚೌತಿಯ ಮುಂಚಿನ ದಿನವಾದ ಗೌರಿ ಹಬ್ಬವನ್ನು ತೆನೆ ಹಬ್ಬವನ್ನಾಗಿಯೂ ಕೆಲವು ಕಡೆ ಆಚರಿಸುತ್ತಾರೆ. ಅಂದು ತೆನೆಯನ್ನು ಮನೆ ತುಂಬಿಸುವ ಸಂಭ್ರಮವೂ ಜರಗಿ ಚೌತಿ ಆಚರಣೆಗೆ ಮುನ್ನುಡಿ ಬರೆಯಲಾಗುತ್ತದೆ.
ಗಣಪತಿ ಮೂತರ್ಿ ಪ್ರತಿಷ್ಠಾಪನೆ, ಕಡುಬು, ಮೋದಕ, ಸಿಹಿತಿಂಡಿಗಳ ಸಮರ್ಪಣೆ, ಪೂಜೆ ಮುಂತಾದ ಪದ್ಧತಿಗಳು ತುಳುನಾಡಿನ ಚೌತಿ ಆಚರಣೆಯಲ್ಲಿ ಇರುವುದಿಲ್ಲ. ಕಬ್ಬನ್ನು ಸವರಿ, ಸೀಳುಮಾಡಿ ಒಂದಡಿ ಉದ್ದದಷ್ಟು ಕತ್ತರಿಸಿದ ತುಂಡುಗಳನ್ನು ಚೌಕಾಕಾರದಲ್ಲಿ ಒಂದೆರಡು ಅಡಿ ಅಟ್ಟಿ ಮಾಡಲಾಗುತ್ತದೆ. ಕೆಲವು ಕಡೆ ಈ ಚೌಕಾಕಾರದ ಅಟ್ಟಿಯ ಒಳಗೆ ಕಲಶ ಪ್ರತಿಷ್ಠಾಪಿಸುವುದೂ ಇದೆ. ಅದರ ಮೇಲೆ ಬಾಳೆ ಎಲೆ ಹಾಕಿ ಧಾನ್ಯಗಳಿಂದ ತಯಾರಿಸಿದ ಕಜ್ಜಾಯ, ಅಕ್ಕಿಯ ತೆಲ್ಲವು (ದೋಸೆ) ಬೆಲ್ಲ, ಪೊರಿ (ಹರಳು) ಹಾಕಲಾಗುತ್ತಿದೆ. ಹಿಂದಿನ ಕಾಲದಲ್ಲಿ ಒಲೆಯ ಮಣ್ಣಿನ `ಓಡು' ಇಟ್ಟು ಅದು ಕಾದಾಗ ಅದರ ಮೇಲೆ ಬತ್ತ ಹಾಕಿ ಅರಳಿಸಿ ತಯಾರಿಸಲಾದ `ಪೊದ್ದೊಲು' ವನ್ನು ಗಣಪತಿಗೆ ಸಮಪರ್ಿಸಲಾಗುತ್ತದೆ. ಈಗ ಸುಲಭವಾಗಿ ಅಂಗಡಿಯಲ್ಲಿ ಸಿಗುವ ಹರಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಗಣಪತಿಗೆ ತಯಾರಿಸುವ ಕಜ್ಜಾಯ, ತೆಲ್ಲವುಗಳಿಗೆ ಉಪ್ಪಿನ ನಿಷೇಧವಿದೆ.
ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಹೂಗಳು ಸಿಗುತ್ತವೆ. ಚೌತಿ ಮಳೆಗಾಲದಲ್ಲಿ ಬರುವುದರಿಂದ ಹೂಗಳು ಸಿಗುತ್ತಿರಲಿಲ್ಲ. ಅಂತಹಾ ಸಂದರ್ಭದಲ್ಲಿ `ಪೂ-ಬಿತ್ತ್' ಎಂಬ ವಿಶೇಷವಾದ ಹೂ ಅಂದರೆ ಧಾನ್ಯದ ಮೊಳಕೆಯನ್ನು ಚೌತಿ ಸಂದರ್ಭದಲ್ಲಿ ಬಳಸಲಾಗುತ್ತಿತ್ತು. ವಿಧವಿಧವಾದ ಧಾನ್ಯಗಳನ್ನು ಚೌತಿಗಿಂತ ಒಂದು ವಾರಗಳ ಮುಂಚಿತವಾಗಿ ಬಿತ್ತಿ ಮೊಳಕೆ ಬರಿಸಲಾಗುತ್ತಿತ್ತು. ಇವು ಚೌತಿಯ ದಿನ ಉದ್ದುದ್ದ ಮೊಳಕೆಗಳು ಬಂದಾಗ ಅದನ್ನು ಕಿತ್ತು ತೆಗೆದು ಸೂಡಿ ಕಟ್ಟಿ ಕಬ್ಬಿನ ಗಣಪತಿಯ ಅಲಂಕಾರವನ್ನು ಮಾಡಲಾಗುತ್ತಿತ್ತು. ಈಗಲೂ ಹಳ್ಳಿಯ ಮನೆಗಳಲ್ಲಿ ಕಬ್ಬಿನ ಗಣಪತಿ ಇಡುವವರು ಪೂಬಿತ್ತನ್ನು ಹಾಕುತ್ತಾರೆ. ಪೂಬಿತ್ತ್ನಿಂದ ಕಬ್ಬಿನ ಗಣಪತಿಯನ್ನು ಅಲಂಕಾರ ಮಾಡಲಾಗುತ್ತದೆ. ಇದನ್ನೇ ಹೆಂಗಳೆಯರು ಪ್ರಸಾದವಾಗಿ ಮುಡಿಗೇರಿಸುತ್ತಾರೆ.
ಹೆಚ್ಚಿನ ಕಡೆಗಳಲ್ಲಿ ಮನೆಯ ಚಾವಡಿಯಲ್ಲಿ ಎರಡು ಕಬ್ಬಿನ ಗಣಪತಿಯನ್ನು ಇಡಲಾಗುತ್ತದೆ. ಒಂದು ಗೌರಿ. ಇನ್ನೊಂದು ಗಣಪ. ಮಧ್ಯಾಹ್ನದ ಹೊತ್ತಿಗೆ ಗಣಪನನ್ನು ಅಂಗಳದ ತುಳಸಿ ಕಟ್ಟೆಯ ಬಳಿ ತಂದು ಧೂಪದಿಂದ ಪೂಜಿಸಿ ಪ್ರಾಥರ್ಿಸಲಾಗುತ್ತದೆ. ಆನಂತರ ಗಣಪನನ್ನು ಚಾವಡಿಗೆ ಕೊಂಡೊಯ್ದು ಗೌರಿ-ಗಣಪನಿಗೆ
ಧೂಪದಿಂದ ಪೂಜಿಸಿ ಕೈಮುಗಿದು ಗಣಪನನ್ನು ವಿಸಜರ್ಿಸಿ ಅದರ ಕಬ್ಬನ್ನು ಪ್ರಸಾದರೂಪವಾಗಿ ಸ್ವೀಕರಿಸಲಾಗುತ್ತದೆ. ಗೌರಿಯನ್ನು ಸಂಜೆಯ ಹೊತ್ತಿಗೆ ವಿಸಜರ್ಿಸಲಾಗುತ್ತದೆ.
ಉತ್ತರ ಭಾರತದಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿ ಎಬ್ಬಿಸಲು ತಿಲಕರು ಆರಂಭಿಸಿದ ಗಣೇಶೋತ್ಸವವು ಪ್ರಖ್ಯಾತಿಯನ್ನು ಪಡೆದು ಸ್ವಾತಂತ್ರ್ಯಾ ನಂತರ ನಮ್ಮ ತುಳುನಾಡನ್ನೂ ನಿಧಾನವಾಗಿ ಪ್ರವೇಶಿಸಿತು. ಈಗ ಅಲ್ಲಲ್ಲಿ ಸಾರ್ವಜನಿಕ ಗಣೇಶೋತ್ಸವಗಳು, ವೈಭವದ ಮೆರವಣಿಗೆ, ಗಣೇಶ ವಿಸರ್ಜನೆ ನಡೆಸಲಾಗುತ್ತದೆ. ತುಳುನಾಡಿನಲ್ಲಿ ಇದಕ್ಕೆ ಹೆಚ್ಚು ಕಮ್ಮಿ ಐವತ್ತು ವರ್ಷಗಳ ಇತಿಹಾಸವಿದೆ. ಐವತ್ತನೇ ವರ್ಷದ ಗಣೇಶೋತ್ಸವ, ಇಪ್ಪತ್ತೈದನೇ ವರ್ಷದ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಕೆಲವು ಊರುಗಳಲ್ಲಿ ಶಾಂತಿ ಕದಡುವ ಪ್ರಸಂಗಗಳೂ ನಡೆಯುತ್ತಿವೆ.
ಈಗ ಗಣಪ ತುಳುನಾಡಿನ ಮನೆಮನೆಗಳಲ್ಲಿ ಖಾಸಗಿ ಕಬ್ಬಿನ ಗಣಪನಾಗಿ, ಸಾರ್ವಜನಿಕವಾಗಿ ಬೀದಿ ಬೀದಿಗಳಲ್ಲಿ ಬೃಹದಾಕಾರದ ಮೂತರ್ಿಗಳ ರೂಪದಲ್ಲೂ ವಿಜೃಂಭಣೆಯ ಪೂಜೆ ಪಡೆಯುತ್ತಿದ್ದಾನೆ.

ಬಳ್ಳಿಗೂ ಬಯಕೆ!


ಕೃಷಿಕರು ಬೆಳೆ ಬೆಳೆಸಿ ಉಣ್ಣುವವರು. ತಾವು ಬೆಳೆಸುವ ಬೆಳೆ, ಸಾಕುವ ದನ, ಎತ್ತು, ಕೋಣ, ನಾಯಿ, ಬೆಕ್ಕು, ಕೋಳಿ ಮುಂತಾದ ಪ್ರಾಣಿಗಳಿಗೂ ತಮ್ಮಂತೆಯೇ ಆಸೆ ಆಕಾಂಕ್ಷೆಗಳು ಇರುತ್ತವೆ ಎಂದು ಭಾವಿಸುತ್ತಾರೆ. ಬೆಳೆಗಳಿಗೆ ರೋಗ ರುಜಿನಗಳು ಬಂದರೆ ಅವುಗಳೊಂದಿಗೆ ತಾವೂ ಕೊರಗುತ್ತಾರೆ. ಸಾಕು ಪ್ರಾಣಿಗಳು ಸತ್ತು ಹೋದರೆ ಮನೆಯ ಸದಸ್ಯರನ್ನು ಕಳೆದುಕೊಂಡಂತೆ ಕಣ್ಣೀರು ಹಾಕುತ್ತಾರೆ.
ಮಳೆಗಾಲದಲ್ಲಿ ಬೇಸಾಯದ ಜತೆ ತರಕಾರಿ ಕೃಷಿ ಮಾಡುವುದು ರೈತರ ಹವ್ಯಾಸ. ಬೆಂಡೆ, ಅಲಸಂಡೆ, ಹರಿವೆ ಮುಂತಾದವುಗಳನ್ನು ಬೆಳೆಸುತ್ತಾರೆ. ಸೌತೆ, ಕಾಯಿ, ಕುಂಬಳಕಾಯಿ ಚೀನೀ ಕಾಯಿ (ಕೆಂಬುಡೆ) ಸೋರೆಕಾಯಿ, ಹೀರೇಕಾಯಿ ಮುಂತಾದ ಬಳ್ಳಿಗಳು ರೈತರ ಅಂಗಳದಲ್ಲಿ ವಿಶಾಲವಾಗಿ ಹರಡಿ ಸುಂದರವಾಗಿ ಕಾಣುತ್ತವೆ. ಮಳೆಗಾಲದಲ್ಲಿ ಬೆಳೆಸಿದ ಬಳ್ಳಿಗಳು ತುಳುವರ ಸೋನ ಅಥವಾ ಶ್ರಾವಣ ತಿಂಗಳಲ್ಲಿ ಹೂ ಬಿಡುತ್ತವೆ. ಕುಂಬಳ, ಚೀನಿಕಾಯಿ, ಸೋರೆಕಾಯಿಗಳ ಬಳ್ಳಿ ತುಂಬಾ ಹೂವುಗಳು ನಳನಳಿಸಿದರೂ, ಎಲ್ಲವೂ ಮುದುಡಿ, ಉದುರಿ ಹೋಗಿ ಒಂದೇ ಒಂದು ಹೂ ಫಲವಾಗುವ ಲಕ್ಷಣ ಕಂಡು ಬರದೇ ಇದ್ದಾಗ ಮನೆಯ ಯಜಮಾನಿಗೆ ತಕ್ಷಣ ನೆನೆನಪಾಗುವುದು ತುಳುವರ `ಬಯಕೆ' ಅಥವಾ ಸೀಮಂತ ಎಂಬ ಸಂಪ್ರದಾಯ. ಆಕೆ ಬಳ್ಳಿಗೂ ಬಯಕೆ ಹಾಕುವ ತಯಾರಿ ನಡೆಸುತ್ತಾಳೆ.
ಮುಸ್ಸಂಜೆಯ ಹೊತ್ತು ಈ ಬಯಕೆ ಸಂಪ್ರದಾಯವು ನೆರವೇರುತ್ತದೆ. ಬೆಲ್ಲ ಮತ್ತು ಅನ್ನವನ್ನು ಬೆರೆಸಿ ಅದನ್ನು ಚೀನೀ ಕಾಯಿಯ ಎಲೆಯಲ್ಲಿ ಸುರಿದು ಅದನ್ನು ಹುಲ್ಲಿನಿಂದ ಕಟ್ಟಿ ಕೈ ಮುಗಿಯುತ್ತಾರೆ. ಕುಂಬಳ, ಸೋರೆಕಾಯಿಯ ಬಳ್ಳಿಯ ಎಲೆಗೆ ಅನ್ನ ಮತ್ತು ಬೂದಿಯನ್ನು ಹಾಕಿ ಕಟ್ಟಿದರೆ ಬಳ್ಳಿಯ ಬಯಕೆ ಸಂಪ್ರದಾಯ ಮುಗಿಯುತ್ತದೆ.
ಕಾಕತಾಳೀಯವಾಗಿಯೋ ಅಥವಾ ಬಯಕೆಯಿಂದ ತೃಪ್ತಿಗೊಂಡೋ ಬಳ್ಳಿಯಲ್ಲಿ ಮುಂದಿನ ದಿನಗಳಲ್ಲಿ ಹೂವಿನ ಬುಡದಲ್ಲಿ ಪೀಚು ಕಾಯಿಗಳು ಕಾಣಿಸಿಕೊಳ್ಳತೊಡಗುತ್ತಾ ದಿನ ಕಳೆದಂತೆ ಬಳ್ಳಿ ಎಲ್ಲೆಲ್ಲಾ ಹರಡಿದೆಯೋ ಅಲ್ಲಲ್ಲಿ ಕಾಯಿಗಳು ಕಾಣಿಸಿಕೊಂಡು ಅದು ಬೆಳೆಯತೊಡಗುತ್ತವೆ.
ಆಧುನಿಕ ಕೃಷಿ ಪದ್ಧತಿಗಳಲ್ಲಿ ಗಿಡ ನೆಡುವುದಕ್ಕೆ ಮೊದಲು ಮಣ್ಣಿಗೆ ರಾಸಾಯನಿಕ ಗೊಬ್ಬರ, ಹೂ ಬಿಡಲು, ಕಾಯಿ ಭದ್ರವಾಗಲು, ಬೆಳೆಯಲು ಬೇಕಾದ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಕೊನೆಗೆ ಗಿಡದಿಂದ ಕಾಯಿಯನ್ನು ಕೊಯ್ದಾದ ನಂತರವೂ ಅದು ಕೆಡದಂತೆ ಬಹುಕಾಲ ಇಡಲು ಅಥವಾ ಬೇಗ ಹಣ್ಣಾಗಲು ರಾಸಾಯನಿಕವನ್ನು ಸೂಜಿಯ ಮೂಲಕ ಚುಚ್ಚಲಾಗುತ್ತದೆ. ಈ ಮೂಲಕ ಮನುಷ್ಯನ ದೇಹ ರಾಸಾಯನಿಕಗಳ ಕೂಪವಾಗುತ್ತಿದೆ.
ತರಕಾರಿ ಬಳ್ಳಿಗೂ ತಮ್ಮ ಭಾವನೆಗಳನ್ನು ಧಾರೆ ಎರೆದು ಬೆಳೆ ಬೆಳೆಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದ ನಮ್ಮ ಪೂರ್ವಜರು ನಿಜವಾಗಿಯೂ ಧನ್ಯರು.

ಅಷ್ಟಮಿಗೆ ಹಿರಿಮಗನ ಅಡವು !


ಅಷ್ಟಮಿಯನ್ನು ತುಳುನಾಡಿನ ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಖಾಸಗಿಯಾಗಿ ಮನೆ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದ ಅಂತಿಮ ಹಂತದಲ್ಲಿ ಈ ಹಬ್ಬವು ಬರುತ್ತದೆ. ಕೆಲವು ಬಾರಿ ಅಷ್ಟಮಿಯ ದಿನಗಳಲ್ಲಿ ಧಾರಾಕಾರ ಮಳೆ ಸುರಿಯುವುದೂ ಇದೆ. ಅಷ್ಟಮಿಯ ದಿನಗಳು ತೀರಾ ಮುಗ್ಗಟ್ಟಿನ ದಿನಗಳು. ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಅಕ್ಕಿ ಮತ್ತಿತರ ಸೊತ್ತುಗಳು ಮುಗಿದಿರುತ್ತವೆ. ಮಳೆಗಾಲ ಬಿರುಸಾದರೆ ಅಷ್ಟಮಿಯ ದಿನಗಳಲ್ಲಿ ತಿಂಡಿ ಮಾಡುವ ಸಲುವಾಗಿ ಒಲೆ ಉರಿಸಲೂ ಕಟ್ಟಿಗೆ ಇಲ್ಲದ ಪರಿಸ್ಥಿತಿ ಎದುರಾಗುವುದುಂಟು. ಅದೇನಿದ್ದರೂ ಅಷ್ಟಮಿಯ ದಿನ ಮೂಡೆ ಮಾಡಲೇ ಬೇಕು ಎಂಬ ಹಟ ಮನೆಯೊಡತಿಯರಲ್ಲಿ ಇರುತ್ತದೆ. ಅಷ್ಟಮಿ ಹಬ್ಬ ಆಚರಿಸಲು ಹಿರಿಮಗನನ್ನು ಊರಿನ ಗುತ್ತಿನವರ, ಶ್ರೀಮಂತರ ಮನೆಯಲ್ಲಿ ಅಡವು ಇಟ್ಟಾದರೂ ಅಕ್ಕಿ ತರುತ್ತಿದ್ದರಂತೆ. ಹೀಗೆ ಅಡವಿಟ್ಟ ಮಗನನ್ನು ಮುಂದಿನ ಶಿವರಾತ್ರಿಯ ದಿನ ಬಿಡಿಸಿಕೊಳ್ಳಲಾಗುತ್ತಿತ್ತಂತೆ!. ಇದು ಹಳೆಯಕಾಲದ ಮಾತು.

ಸಾಮಾನ್ಯವಾಗಿ ಇಲ್ಲಿ ಅಷ್ಟಮಿಯನ್ನು ಮೂರು ದಿವಸಗಳ ಹಬ್ಬವಾಗಿ ಆಚರಿಸುತ್ತಾರೆ. ಅಷ್ಟಮಿಯ ಮುಂಚಿನ ದಿವಸ ರಾತ್ರಿ ಉಪವಾಸ ಆರಂಭಿಸುವ ಕ್ರಮಕ್ಕೆ `ಬೊಲಂಕ್ ಅಥವಾ `ಬಲೊಟ್ಟು ಕುಲ್ಲುನಿ' ಎಂದು ಕರೆಯುತ್ತಾರೆ. ಪ್ರಾದೇಶಿಕವಾಗಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ. ಆಚರಣೆಯೂ ಭಿನ್ನ ಭಿನ್ನವಾಗಿರುತ್ತದೆ. ಇದನ್ನು ವ್ರತದಲ್ಲಿ ಕುಳಿತುಕೊಳ್ಳುವುದು ಎನ್ನುತ್ತಾರೆ. ಹೆಚ್ಚಿನ ಕಡೆಗಳಲ್ಲಿ ಈ ದಿನ ತುಳುನಾಡಿನ ವಿಶೇಷ ತಿಂಡಿಯಾದ ಪತ್ರೊಡೆಯನ್ನು ಮಾಡುತ್ತಾರೆ. ತಡರಾತ್ರಿ ಹೊಟ್ಟೆತುಂಬಾ ತಿಂಡಿ ತಿಂದು ಉಪವಾಸದ ವೃತವನ್ನು ಆರಂಭಿಸುತ್ತಾರೆ.
`ಅಷ್ಟಮಿ ಪಾಸ' ಅಂದರೆ ಅಷ್ಟಮಿಯ ಉಪವಾಸ ಹಿಡಿಯುವವರಿಗೆ ಅಷ್ಟಮಿ ದಿವಸದ ಚಂದ್ರೋದಯದವರೆಗೆ ಕಠಿಣವಾದ ವ್ರತವಿರುತ್ತದೆ. ಮಧ್ಯಾಹ್ನ ಸೀಯಾಳ ಕುಡಿಯುವ ಕ್ರಮವಿದೆ.
ಈ ನಡುವೆ ಅಷ್ಟಮಿಯ ರಾತ್ರಿ ಊಟಕ್ಕೆ ಬಗೆ ಬಗೆಯ ತಿಂಡಿ ತಿನಸುಗಳು ತಯಾರಾಗುತ್ತವೆ. `ಮೂಡೆ' ಇದರಲ್ಲಿ ಪ್ರಮುಖವಾದದ್ದು, ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆಯನ್ನು ಹೆಣೆಯುತ್ತಿದ್ದರು. ಈಗ ಇದು ವಾಣಿಜ್ಯೀಕರಣವಾಗಿದೆ. ಮೂಡೆ ಕಟ್ಟಿ ಮಾರಾಟ ಮಾಡುವುದು ಕೆಲವರ ಕಾಯಕವಾಗಿದೆ. ಮಾರುಕಟ್ಟೆಗಳಲ್ಲಿ ಹತ್ತು ರೂಪಾಯಿಗೆ ಎರಡು ಅಥವಾ ಮೂರು ಮೂಡೆಗಳು ಸಿಗುತ್ತವೆ. ಹಲಸಿನ ಎಲೆಯಿಂದ ಮಾಡಿದ `ಗುಂಡ' ಅಥವಾ `ಕೊಟ್ಟಿಗೆ'ಯಲ್ಲಿ ಅಕ್ಕಿಯ ಹಿಟ್ಟು ಹಾಕಿ ಬೇಯಿಸಿದ ತಿಂಡಿಯನ್ನು ಈ ದಿನ ಮಾಡುತ್ತಾರೆ. `ಸೇಮೆದಡ್ಡೆ', ಹಾಲು ಅಥವಾ ಪಾಯಸವನ್ನು ಸಿಹಿತಿನಿಸಾಗಿ ಮಾಡಲಾಗುತ್ತದೆ. ಹೆಚ್ಚಿನ ಬ್ರಾಹ್ಮಣರ ಮನೆಯಲ್ಲಿ ಉಂಡೆ, ಚಕ್ಕುಲಿ, ಕೋಡು ಬಳೆ ಮುಂತಾದವುಗಳನ್ನು ಮಾಡುತ್ತಾರೆ. ಇದೆಲ್ಲವನ್ನೂ ಮಾಡಿಟ್ಟುಕೊಂಡು ವ್ರತ ಮುಕ್ತಾಯದ ಅವಧಿಯಾದ ಚಂದ್ರೋದಯವನ್ನು ಕಾದು ಕುಳಿತುಕೊಳ್ಳುತ್ತಾರೆ.
ಇತ್ತೀಚಿಗಿನ ದಿನಗಳಲ್ಲಿ ಟಿ.ವಿ ಮುಂತಾದ ಆಧುನಿಕ ಉಪಕರಣಗಳಿಂದಾಗಿ ಜನರು ಮಲಗುವುದೇ ತಡವಾಗಿ. ಟಿ.ವಿಯಲ್ಲಿ ಪ್ರಸಾರವಾಗುವ ಅಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ನೋಡುತ್ತಾ ಕುಳಿತರೆ ಚಂದ್ರೋದಯವಾಗುವುದೇ ಗೊತ್ತಾಗುವುದಿಲ್ಲ. ಹಿಂದಿನ ಕಾಲದ ತುಳುನಾಡಿನಲ್ಲಿ ರಾತ್ರಿ ಕಾಲದಲ್ಲಿ ಬೇಗನೆ ಮಲಗಿ ಬೆಳಗ್ಗೆ ಬೇಗ ಏಳುವುದು ರೂಢಿಯಾಗಿತ್ತು. ಆ ಸಂದರ್ಭದಲ್ಲಿ ಚಂದ್ರೋದಯದವರೆಗೆ ಕಾಯುವುದು ಎಂದರೆ ತುಸು ಕಷ್ಟದ ಕೆಲಸವಾಗಿತ್ತು, ಹಸಿವು ಮತ್ತು ನಿದ್ದೆ ಕಾಡುತ್ತಿತ್ತು. ಇವುಗಳನ್ನು ಹೊಡೆದೋಡಿಸಲು ಭಜನೆ ನಡೆಸುತ್ತಿದ್ದರು. ಇಲ್ಲವಾದಲ್ಲಿ ಮನೆಯ ಹಿರಿಯರು ಸೇರಿ ಚೆನ್ನೆಮಣೆ ಆಟಕ್ಕೆ ರಂಗೇರಿಸುತ್ತಿದ್ದರು. ಕೆಲವರು ಇಸ್ಪೀಟು ಆಟಕ್ಕೂ ಮೊರೆಹೋಗುತ್ತಿದ್ದುದುಂಟು. ರಾತ್ರಿ ಚಂದ್ರ ಕಾಣಿಸಿಕೊಂಡಾಗ ಮನೆಯ ತುಳಸಿಕಟ್ಟೆಯ ಮುಂದೆ ಅಘ್ರ್ಯ ಸಮಪರ್ಿಸಿ ದೈವ-ದೇವರುಗಳಿಗೆ ಬಡಿಸಿ ಉಪವಾಸವನ್ನು ಕೊನೆಗೊಳಿಸಲಾಗುತ್ತಿತ್ತು.
ಮರುದಿನ `ದ್ವಾದಶಿ'(?). ಯಾವಾಗಲೂ ಏಕಾದಶಿಯ ದಿನ ಮರುದಿನ ದ್ವಾದಶಿ ಬಂದರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನವನ್ನು ತುಳುನಾಡಿನಲ್ಲಿ `ದ್ವಾದೇಸಿ' ಎಂದೇ ಕರೆಯುತ್ತಾರೆ. ಅಷ್ಟಮಿಯ ದಿನ ಉಪವಾಸ ಆದುದರಿಂದ ಆ ದಿನ ಏಕಾದಶಿ ಹಾಗಿರುವಾಗ ಅದರ ಮರುದಿನ ದ್ವಾದಶಿ ಆಗಬೇಕಲ್ಲವೇ?. ಈ ದಿನ ಮಧ್ಯಾನ್ನ ಭೂರಿ ಭೋಜನ. ಕೆಲವು ಕಡೆ ಮಾಂಸದ ಊಟವನ್ನೂ ಮಾಡುತ್ತಾರೆ. ಮನೆಯಲ್ಲಿ ಮಾಡಿದ ತಿಂಡಿ ತಿನಸುಗಳನ್ನು ಇತರ ಧರ್ಮದ ಮನೆಗಳಿಗೂ ಹಂಚಿ ಸೌಹಾರ್ದ ಮೆರೆಯುತ್ತಾರೆ.
ಊಟವಾದ ನಂತರ ಊರಿನ ಪ್ರಮುಖ ಕೇಂದ್ರದಲ್ಲಿ ನಡೆಯುವ `ಮೊಸರು ಕುಡಿಕೆ' ಉತ್ಸವಕ್ಕೆ ಹೋಗಲೇ ಬೇಕು. ಅಲ್ಲಿ ನಡೆಯುವ ಮನರಂಜನೆಯಲ್ಲಿ ಪಾಲ್ಗೊಳ್ಳು ಉತ್ಸಾಹ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಮಳೆಗಾಲದಲ್ಲಿ ಯಾವುದೇ ಸಾರ್ವಜನಿಕ ಮನರಂಜನೆ ಕಾರ್ಯಕ್ರಮಗಳು ಇರದೇ ಇದ್ದ ಕಾರಣ ಮೊಸರು ಕುಡಿಕೆ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ಹಿಂದಿನ ಕಾಲದಲ್ಲಿ ಮಧ್ಯಾಹ್ನ ಊಟವಾದ ನಂತರ ಊರಿನ ಯುವಕರು ಸೇರಿಕೊಂಡು `ಮಸುಲುಡಿಕೆ' (ಮೊಸರು ಕುಡಿಕೆ) ಆಚರಿಸುತ್ತಿದ್ದರು. ಸಾಹಸದ ಆಟಗಳನ್ನು ಆಡುತ್ತಿದ್ದರು, ತಪ್ಪಂಗಾಯಿ, ಹಗ್ಗ ಎಳೆಯುವುದು ಮುಂತಾದ ಕ್ರೀಡೆಗಳನ್ನು ಆಡುತ್ತಿದ್ದರು. ಗೆದ್ದವರಿಗೆ ಬಾಳೆ ಹಣ್ಣು, ಸೀಯಾಳದ ಬಹುಮಾನ ಸಿಗುತ್ತಿತ್ತು. ಎತ್ತರ ಪ್ರದೇಶದಲ್ಲಿ ನೇತಾಡಿಸಿದ ಮೊಸರಿನ ಗಡಿಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವುದು. ಎತ್ತರವಾದ ಅಡಿಕೆ ಮರದ ತುದಿಯಲ್ಲಿ ಕಟ್ಟಿದ ನಿಧಿಯನ್ನು ತೆಗೆಯುವುದು ಮುಂತಾದ ಸಾಹಸ ಪ್ರದರ್ಶನವಾಗುತ್ತಿತ್ತು, ಕೆಲವು ಪ್ರದೇಶಗಳಲ್ಲಿ ನಡೆಯುತ್ತಿದ್ದ ಇಂತಹಾ ಕಾರ್ಯಕ್ರಮಗಳ ತಾಜಾತನದ ಸಂಭ್ರಮವನ್ನು ಈಗಲೂ ಹಿರಿಯರು ಮೆಲುಕು ಹಾಕುತ್ತಾರೆ. ಈಗೀಗ ಗ್ರೀಸ್ ಸವರಿದ ಕಂಬ ಹತ್ತುವ ಅಪಾಯಕಾರಿ ಆಟದಿಂದ ಕೆಲವರು ಸೊಂಟ ಮುರಿದುಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಊರಿನ ಯುವಕರೇ ಸೇರಿಕೊಂಡು ಮಾದಿರ ಕುಣಿತ, ಹುಲಿ, ಕರಡಿ ಕುಣಿತ, ನಾಟಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ ಈಗ ನಾಟಕ ತಂಡಗಳನ್ನು ಕರೆಸಿ ನಾಟಕ, ರಸಮಂಜರಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಶ್ರೀಕೃಷ್ಣ ವೇಷ ಸ್ಪಧರ್ೆ ಎಲ್ಲೆಡೆ ನಡೆಯುತ್ತಿದೆ.
ತೆಂಗಿನ ಕಾಯಿಗಳನ್ನು ಪರಸ್ಪರ ಘರ್ಷಣೆ ಮಾಡುವ `ತಾರಾಯಿದ ಕಟ್ಟ' ಎಂಬ ತುಳು ಜಾನಪದ ಕ್ರೀಡೆ ಅಷ್ಟಮಿಯ ದಿನಗಳಲ್ಲಿ ನಡೆಯುತ್ತದೆ. ಇದೊಂದು ಜಾನಪದ ಕ್ರೀಡೆಯಾದರೂ ಈ ಆಟದ ಮೇಲೆ ಜೂಜು ಕಟ್ಟಿ ಅಷ್ಟಮಿಯಂತಹಾ ಶುಭ ಸಂದರ್ಭದಲ್ಲಿ ಕಿಸೆ ಖಾಲಿ ಮಾಡಿಕೊಳ್ಳುವ ಪ್ರವೃತ್ತಿಯೂ ಕೆಲವರಿಗೆ ಇರುತ್ತದೆ. ಜೂಜಾಡುವವರಿಗೆ ಸುಖ-ದುಃಖಗಳ ಪರಿವೆಯೇ ಇರುವುದಿಲ್ಲ.

ಬಾಯಲ್ಲಿ ನೀರೂರಿಸುವ ಕಳೆಗಿಡ


`ಪತ್ರೊಡೆ' ಎಂದು ಅಂತಜರ್ಾಲದಲ್ಲಿ ಶೋಧಿಸಿದರೆ ಸಾವಿರಾರು ಸೈಟ್ಗಳು, ಚಿತ್ರಗಳು ತೆರೆದುಕೊಳ್ಳುತ್ತವೆ. ತುಳುನಾಡಿನಲ್ಲಿ ಪ್ರಖ್ಯಾತವಾದ, ಇಲ್ಲಿನ ಪ್ರತಿಯೊಂದು ಮನೆಯವರೂ ವರ್ಷಕ್ಕೊಂದು ಬಾರಿ ಮನೆಯಲ್ಲಿ ತಪ್ಪದೆ ಮಾಡುವ `ತುಳುನಾಡಿನ ತಿಂಡಿ' ಅಷ್ಟೂ ಪ್ರಸಿದ್ಧವಾಗಿದೆ.
ಈ ಪತ್ರೊಡೆಗೆ ಪ್ರಮುಖವಾಗಿ ಬಳಸಲಾಗುವ `ತೇವು' ಅಂದರೆ ಕೆಸು ಮಳೆ ಬಿದ್ದಾಗ ನೀರು, ಕೆಸರು ನಿಲ್ಲುವ ಜಾಗದಲ್ಲಿ ಸೊಕ್ಕಿ ಬೆಳೆಯುವ ಕಳೆಗಿಡ ಎಂದು ಹೇಳಿದರೆ ನಾವು ಮನಸ್ಸಿನಲ್ಲಿ `ಹೌದು' ಎಂದು ಅಂದುಕೊಂಡರೂ, ಪತ್ರೊಡೆಯ ರುಚಿಯ ಅರಿವಿರುವವರು ಬಹಿರಂಗವಾಗಿ ಕೆಸುವಿನ ಘನತೆಗೆ ಕುಂದುಂಟು ಮಾಡಲು ಬಯಸುವುದಿಲ್ಲ.
ಪತ್ರೊಡೆಗೆ ಬಳಸುವ ಕೆಸುವನ್ನು ಸಾಮಾನ್ಯವಾಗಿ ತೋಟದಿಂದ, ಗದ್ದೆಯ ಬದಿಯಿಂದ, ನೀರು ಹರಿದು ಹೋಗುವ ತೋಡಿನ ಎಡೆಯಿಂದ, ಕೆಲವೊಮ್ಮೆ ಕೊಳಚೆ ಗುಂಡಿಯಿಂದಲೂ ಆಯ್ದು ತೆಗೆಯುತ್ತೇವೆ. ಮನೆಯ ಅಕ್ಕಪಕ್ಕದಿಂದ ನಾವೇ ಕೆಸುವನ್ನು ಆರಿಸಲು ಪ್ರಯತ್ನಿಸಿದರೆ ಸಾಮಾನ್ಯವಾಗಿ `ಉತ್ತಮ' ಜಾಗ ಎಂದು ಮನಸ್ಸಿಗನಿಸಿದ ಕಡೆಯಿಂದ ಕೆಸು ಎಲೆಗಳನ್ನು ಕಿತ್ತು ತರುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಸು ಎಲ್ಲಿ ಬೆಳೆದಿರುವಂತದ್ದು ಎಂಬ ಮೂಲವನ್ನು ಹುಡುಕಲು ಖಂಡಿತವಾಗಿಯೂ ಹೋಗುವುದಿಲ್ಲ. ಪೇಟೆ ಪಟ್ಟಣಗಳಲ್ಲಿ ಹೂ ಕುಂಡಗಳಲ್ಲಿ ಇತ್ತೀಚೆಗೆ ಕೆಸುವನ್ನು ಬೆಳೆಸುವ ಪರಿಪಾಠ ಆರಂಭವಾಗಿದ್ದರೂ ಅದರಿಂದ ಮಾಡಿದ ಪತ್ರೊಡೆ ಅಷ್ಟು ರುಚಿ ಎನಿಸದು. ಚೆನ್ನಾಗಿ ಬಲಿತ ತಾಜಾ ಕೆಸುವಿನ ಪತ್ರೊಡೆಯ ರುಚಿಯೇ ಬೇರೆ ರೀತಿಯದ್ದಾಗಿರುತ್ತದೆ. ಈ ರೀತಿಯ ಕೆಸು ಸಿಗಬೇಕಾದರೆ ಕೈಕಾಲುಗಳಿಗೆ ಕೆಸರು ಮೆತ್ತಿಸಿಕೊಳ್ಳಲೇ ಬೇಕು.
ಆಹಾರಕ್ಕಾಗಿ ಬಳಸುವ ಇತರ ಎಲ್ಲಾ ತರಕಾರಿ ಸೊಪ್ಪು ಸದೆಗಳ ಕೃಷಿಗಳ ಬಗ್ಗೆ ವಿವಿಧ ಮೂಲಗಳಿಂದ ನಮಗೆ ಮಾಹಿತಿ ಸಿಕ್ಕಿದರೂ `ಕೆಸುವಿನ ಕೃಷಿ' ಎಂಬ ಮಾತು ನಮ್ಮಲ್ಲಿ ಇನ್ನೂ ಬಳಕೆಗೆ ಬಂದಿಲ್ಲ. ಮನೆಯ ಮುಂದೆ ಸೌಂದರ್ಯಕ್ಕಾಗಿ ಬಣ್ಣ ಬಣ್ಣದ ಕೆಸುವಿನ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಕಂಡು ಬರುತ್ತದೆ. ಆದರೆ ಹಸಿರು ಬಿಟ್ಟು ಅದರ ಮೇಲೆ ಒಂದೇ ಒಂದು ಬಣ್ಣದ ಚುಕ್ಕೆ ಇದ್ದರೂ ಅಂತಹಾ ಕೆಸು ಪತ್ರೊಡೆಗೆ ಯೋಗ್ಯವೆನಿಸುವುದಿಲ್ಲ.
ಪತ್ರೊಡೆಯಲ್ಲಿ ಕೆಸುವಿನ ಎಲೆಯನ್ನು ಮಾತ್ರ ಬಳಸಲಾಗುತ್ತದೆ. ಅದರ ದಂಡನ್ನು ಬಳಸಲಾಗುವುದಿಲ್ಲ. ಹಾಗಿರುವಾಗ ಕೆಸುವಿನ ಎಲೆಯಲ್ಲಿ ಯಾವುದೇ ದೋಷ ಇಲ್ಲ, ಯಾವ ಪ್ರದೇಶದಲ್ಲೂ ಬೆಳೆದ ಕೆಸುವಿನ ಎಲೆಯನ್ನು ಮಾತ್ರ ಉಪಯೋಗಿಸಬಹುದು ಎಂದು ಕೆಲವರು ಸುಮ್ಮನೆ ಸಬೂಬು ಹೇಳುವುದುಂಟು. ಇದು ಮಾನಸಿಕ ಸಮಾಧಾನಕ್ಕಾದರೂ ಎಲೆಗೆ ಯಾಕೆ ದೋಷ ಇಲ್ಲ ಎಂದು ಪ್ರಶ್ನಿಸಿದರೆ ಬರುವ ಉತ್ತರ ತುಂಬಾ ಸ್ವಾರಸ್ಯಕರ. `ಸಂಸಾರದಲ್ಲಿ ಕಮಲದೆಲೆಯಂತೆ ಇರಬೇಕು' ಎಂಬ ಸಾಹಿತ್ಯಿಕ ಮಾತು ಕೂಡಾ ಇಲ್ಲಿ ನೆನಪಿಗೆ ಬರುತ್ತದೆ. ಕಮಲದ ಎಲೆ ಸದಾ ನೀರಿನ ಮೇಲೆ ಇದ್ದರೂ ಒಂದೇ ಒಂದು ನೀರ ಹನಿಯೂ ಅದಕ್ಕೆ ಅಂಟಿರುವುದಿಲ್ಲ. ಎಲೆಯ ಮೇಲೆ ಬಿದ್ದ ನೀರು ಹಾಗೇ ಬಿಂದು ಬಿಂದುಗಳಾಗಿ ಜಾರಿ ಹೋಗುತ್ತದೆ. ಹಾಗೆ ಸಂಸಾರದಲ್ಲಿ ನಾವು ಇದ್ದರೂ ಇಲ್ಲದಂತಿರಬೇಕು ಎಂದು ಹೇಳಲಾಗುತ್ತಿದೆ. ಹಾಗೆಯೇ ಕೆಸುವಿನ ಎಲೆಯ ಮೇಲೂ ನೀರು ನಿಲ್ಲುವುದಿಲ್ಲ. ಹರಿದು ಹೋಗುತ್ತದೆ. ಹಾಗಿರುವಾಗ ಅದರ ಬುಡದಲ್ಲಿರುವ ಕೊಳಚೆ, ಕೊಚ್ಚೆಯ ಸಂಪರ್ಕ ಎಲೆಗೆ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವು ಭಾಗದಲ್ಲಿ ಬೆಳೆದ ಕೆಸುವಿಗೆ ಕೈ ಹಾಕಿದರೆ ದಿನವಿಡೀ ಕೈ ತುರಿಸಿಕೊಳ್ಳಬೇಕಾಗುತ್ತದೆ.
ತುಳುನಾಡಿನಲ್ಲಿ ಕೆಸುವಿನ ಜತೆ `ತೊಜಂಕ್ ಮತ್ತು ಇತರ ಕೆಲವು ಗಿಡಗಳ ಎಲೆಗಳನ್ನೂ ಪತ್ರೊಡೆ ಮಾಡುವಾಗ ಬಳಸುತ್ತಾರೆ. ಆದರೆ ಇದು ಯಾವುದೂ ನೆಟ್ಟು ಬೆಳೆಸಿದ ಗಿಡಗಳಲ್ಲ. ಕಳೆಗಿಡಗಳೇ. ತೋಟದ ಕಳೆ ಕೀಳುವಾಗ, ಅಂಗಳ ರಿಪೇರಿ ಮಾಡುವಾಗ, ಕಾಲುದಾರಿಯ ಬದಿಯನ್ನು ಸವರುವಾಗ ತೇವು - ತೊಜಂಕಿಗೆ ಎಳ್ಳಷ್ಟೂ ಮರ್ಯಾದೆ ಇರುವುದಿಲ್ಲ. ಇತರ ಕಳೆಗಿಡಗಳೊಂದಿಗೆ ಸೇರಿಕೊಂಡು ತಿಪ್ಪೆ ಸೇರುತ್ತವೆ.