Tuesday, June 21, 2011

ತುಳುನಾಡ ಮಂಜುನಾಥನ ಮುಂದೆ ರಾಜ್ಯದ ನಾಯಕರು



ಮಾತುಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ ಎಂಬ ಮಾತು ಪ್ರಚಲಿತದಲ್ಲಿದೆ. ತುಳುವರ ಪಾಲಿಗಂತೂ ಇದು ಪರಮ ಸತ್ಯವಾದ ಮಾತಾಗಿದೆ. ದೇವರನ್ನು ನಂಬುವ ಪ್ರತಿಯೊಬ್ಬರ ಮನೆಯಲ್ಲೂ ತಿರುಪತಿಯ `ದೇವೆರೆ ಗಂಟ್ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಕುಟುಂಬದ ಸದಸ್ಯರೊಳಗೆ ಎಂದಿಗೂ ಮಂಜುನಾಥನ ಅಥವಾ ಆತನ ಸನ್ನಿಧಿಯಾದ ಧರ್ಮಸ್ಥಳದ ಹೆಸರೆತ್ತಿ ಮಾತು ಹೇಳಬಾರದು ಎಂಬ ನಿಯಮವಿದೆ. ಹಾಗೊಂದು ಮಾತು ಬಂದು ಬಿಟ್ಟರೆ ಅಂದಿನಿಂದ ಆ ಮಾತಿನ ಇತ್ಯರ್ಥವಾಗುವವರೆಗೆ ಮಾತು ಯಾರು ಹೇಳಿದರೋ ಮತ್ತು ಯಾರ ಕುರಿತಾಗಿ ಹೇಳಿದರೋ ಅವರೊಂದಿಗಿನ ಸಂಬಂಧಕ್ಕೆ ತಡೆಯಾಗುತ್ತದೆ. ಈ ಎರಡು ವ್ಯಕ್ತಿಗಳ ಅಥವಾ ಕುಟುಂಬಗಳ ನಡುವೆ `ನುಪ್ಪು ನೀರ್ ಬಂದ್ ಆಗಿಬಿಡುತ್ತದೆ. ಪರಸ್ಪರ ಒಂದೇ ಪಂಕ್ತಿಯಲ್ಲಿ ಇವರು ಕುಳಿತು ಊಟ ಮಾಡುವಂತಿಲ್ಲ. ಒಬ್ಬರು ಇನ್ನೊಬ್ಬ ಮನೆಯ ಅನ್ನ ನೀರು ಮುಟ್ಟುವಂತೆಯೇ ಇಲ್ಲ.
ಹೆಚ್ಚಾಗಿ ಆಸ್ತಿ, ಭೂಮಿ, ಬೆಳೆ, ಫಲಗಳ ವಿಚಾದಲ್ಲಿ ಇಂತಹಾ ಆಜ-ಸೂಲಗಳನ್ನು ತುಳುವರು ಹಾಕಿಕೊಳ್ಳುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅಪವಾದವನ್ನು ಹಾಕಿದಾಗ ಅದು ಸುಳ್ಳು ಅಪವಾದವಾಗಿದ್ದರೆ ಅಪವಾದಕ್ಕೊಳಗಾದವನು ಮನನೊಂದು ಈ ಜಾಗದ ಹೆಸರು ಎತ್ತಿದರೆ ಸಾಕು ಅದೊಂದು `ಆಜ' ವಾಗಿಬಿಡುತ್ತದೆ. ಈ ಕಾರಣದಿಂದಾಗಿ ಕುಟುಂಬಗಳು ಒಡೆದು ಹೋಗುತ್ತವೆ. ಕೆಲವು ಹಿರಿಯರು ಮಾಡಿಕೊಂಡ ಇಂತಹಾ ಆಜ - ಸೂಲಗಳಿಂದ ಅವರ ನಂತರದ ತಲೆಮಾರುಗಳು ಕಷ್ಟ ನಷ್ಟವನ್ನು ಅನುಭವಿಸುತ್ತಾರೆ. ಈ `ಅಜ'ಕ್ಕೆ `ಪಿರಿಕಟ್ಟ್' ಮಾಡದೇ ಇದ್ದರೆ ಕುಟುಂಬಗಳ ಏಳಿಗೆಯೇ ಸಾಧ್ಯವಾಗದು ಎಂಬ ನಂಬಿಕೆ ತುಳುನಾಡಿನಲ್ಲಿ ಬಲವಾಗಿ ಬೇರೂರಿದೆ.
ಈ `ಆಜ-ಸೂಲ'ಗಳನ್ನು ಹಾಕಿ ಕೊಂಡವರು ಕೆಲವು ಸಮಯಗಳ ನಂತರ ಅದನ್ನು ಮರೆತು ಬಿಟ್ಟು ಮತ್ತೆ ಯಾವುದೋ ಸಂದರ್ಭದಲ್ಲಿ ಒಂದಾಗಿಬಿಡುವುದುಂಟು. ಆದರೆ ಅವರು ಮಾಡಿಕೊಂಡ ಆಜದ ದೋಷ ಅವರನ್ನು ಬಿಟ್ಟುಹೋಗುವುದಿಲ್ಲ. `ಮಾತು ಬಿಡ ಮಂಜುನಾಥ' ಎಂಬಂತೆ ಅವರಿಗೆ ಕೆಲವೊಂದು ದೋಷಗಳ ಅನುಭವವಾಗುತ್ತದೆ. ಈ ಬಗ್ಗೆ ಜ್ಯೋತಿಷ್ಯ, ಪ್ರಶ್ನೆ, ದೈವ ದರ್ಶನ ಮುಂತಾದ ಕಡೆ ಪರಿಮಾರ್ಜನೆಯನ್ನು ಕೇಳಿದಾಗ ಅವರು ಯಾವುದೋ ಕಾಲದಲ್ಲಿ ಹಾಕಿಕೊಂಡು ಮತ್ತೆ ಮರೆತುಬಿಟ್ಟ ಆಜ ಸೂಲದ ಬಗ್ಗೆ ನೆನಪು ಹುಟ್ಟುಸುವ ಪ್ರಮಾಣಗಳ ಕಂಡು ಬಂದು. ಕುಟುಂಬಗಳು ಮತ್ತೆ ಅದನ್ನು ನೆನಪಿಸಿಕೊಂಡಾಗ ಪ್ರಶ್ನೆಗಳು ಶ್ರೀಕ್ಷೇತ್ರಕ್ಕೆ ಹೋಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರೆ ದೈವದರ್ಶನದಲ್ಲಿ `ಮೂಡಾಯಿ ರಾಜ್ಯದ `ಆಜ' ತೀರಿಸುವ ಬಗ್ಗೆ ಅಪ್ಪಣೆ ನೀಡುತ್ತವೆ. ಮತ್ತೆ ಯಾವ ಕಾರಣಕ್ಕೂ ಈ ಕ್ಷೇತ್ರದ ಹೆಸರೆತ್ತಿ ವಿವಾದ ಸೃಷ್ಟಿಸಬೇಡಿ ಎಂದು ಕಟ್ಟಪ್ಪಣೆ ನೀಡುತ್ತದೆ. ದೈವ ದೇವರನ್ನು ನಂಬುವ ತುಳುವರು ಈ ಅಪ್ಪಣೆಯನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಧರ್ಮಸ್ಥಳಕ್ಕೆ ಹೋಗಿ ಧಮರ್ಾಧಿಕಾರಿಗಳ ದರ್ಶನ ಮಾಡಿ `ಆಜ ಪಿರಿಪ್ಪುನ' ವಿಧಿ ವಿಧಾನಗಳನ್ನು ಕೈಗೊಂಡು ಧಮರ್ಾಧಿಕಾರಿಗಳು `ನಿಕ್ಲೆನ ಆಜ ಪರಿಹಾರ ಆಂಡ್. ನನ ದುಂಬುಗು ವ್ಯಾಜ್ಯ ಮಲ್ತೊನೊಡ್ಚಿ' ಎಂದು ದೇವರ ಎದುರು ಹೇಳಿ ಆಶೀರ್ವದಿಸಿ ಬುದ್ದಿ ಮಾತು ಹೇಳಿ, ದೇವರ ದರ್ಶನ ಮಾಡಿಕೊಂಡು ಹೋಗಿ ಸಮರಸದಿಂದ ಸುಖವಾಗಿ ಬಾಳುವಂತೆ ಅದೇಶಿಸಿ ಕಳುಹಿಸಿಕೊಡುತ್ತಾರೆ.
ಇದು ಇಂದು ನಿನ್ನೆಯ ಪರಿಪಾಠವಲ್ಲ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ ಮತ್ತು ನಂಬಿಕೆ. ಇದರಿಂದ ಮಾನಸಿಕವಾಗಿ ನೆಮ್ಮದಿಯನ್ನು ಪಡೆದುಕೊಂಡು ಕುಟುಂಬಗಳು ಮತ್ತೆ ಒಗ್ಗಟ್ಟಾಗಿ ತಮ್ಮ ತಮ್ಮ ಏಳಿಗೆಯನ್ನು ಕಂಡು ಕೊಳ್ಳುತ್ತವೆ. ವಾದ, ವಿವಾದ, ವ್ಯಾಜ್ಯ, ಜಗಳ ಇವೆಲ್ಲವುಗಳನ್ನು ಪೂರ್ವಜರಿಂದ ಬಳುವಳಿಯಾಗಿ ಪಡೆದುಕೊಂಡ ಕೆಲವು ಕುಟುಂಬಗಳು ಮತ್ತೆ ಮತ್ತೆ `ಆಜ -ಸೂಲ' ಗಳಿಗೆ ಒಳಗಾಗಿ ಅದನ್ನು ಪರಿಹರಿಸುವ ಚಾಳಿಯನ್ನು ಪ್ರದಶರ್ಿಸುವುದೂ ಉಂಟು. ಇಂತಹಾ ಕುಟುಂಬಗಳು ಅಧಃಪತನದತ್ತ ಸಾಗುತ್ತವೆ.
ತುಳುನಾಡಿನಲ್ಲಿ ಇಂತಹಾ ಸಂಪ್ರದಾಯವಿದ್ದರೆ ಕನರ್ಾಟಕದ ವಿವಿಧ ಭಾಗಗಳಲ್ಲಿ ಧರ್ಮಸ್ಥಳದ ಬಗ್ಗೆ ವಿಧ ವಿಧವಾದ ನಂಬಿಕೆಗಳಿವೆ. ಮಂಜುನಾಥ ಜಗದ್ವ್ಯಾಪಿ. ಈತನ ಹೆಸರಿನಲ್ಲಿ ನ್ಯಾಯ ನೀಡುವ ಧರ್ಮಸ್ಥಳವೂ ವಿಶ್ವವಿಖ್ಯಾತವಾಗಿದೆ. ಈ ಮಂಜುನಾಥನ ಪುಣ್ಯ ಕ್ಷೇತ್ರ ತುಳುನಾಡಿನಲ್ಲಿರುವುದು ತುಳುವರಿಗೆ ಹೆಮ್ಮೆಯ ವಿಚಾರವಾಗಿದೆ.
ಈ ಕ್ಷೇತ್ರದ ಆಜ-ಸೂಲ ಅಂದರೆ ಆಣೆ -ಪ್ರಮಾಣದ ವಿಚಾರವು ಈಗ ನಮ್ಮ ರಾಜ್ಯದ ರಾಜಕೀಯದ ವಲಯದಲ್ಲಿ ಪ್ರಮುಖ ಸುದ್ದಿಯಾಗಿಬಿಟ್ಟಿದೆ. ಮುಖ್ಯ ಮಂತ್ರಿ ಯಡಿಯೂಪ್ಪ ಮತ್ತು ಮಾಜೀ ಮುಖ್ಯಮಂತ್ರಿ ಈಗ ಈ ಕ್ಷೇತ್ರದ ಹೆಸರೆತ್ತಿ ಆಣೆ ಮಾಡಿಕೊಂಡು ಬಿಟ್ಟಿದ್ದಾರೆ. ಕ್ಷೇತ್ರವನ್ನು ಸಂದಶರ್ಿಸಿ ದೇವರ ಮುಂದೆ ಪರಿಹಾರ ಕೇಳುವುದೇ ಇದಕ್ಕೆ ಇರುವ ಪರಿಹಾರವಾಗಿದ್ದು ಬೇರೆ ಯಾವ ವಿಧಾನದಿಂದಲೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಮತ್ತು ದೇಶಾದ್ಯಂತ ಇವರಿಬ್ಬರ ನಡುವಿನ ಆಣೆ-ಪ್ರಮಾಣ ವಿವಾದವು ವಿವಿಧ ಊಹಾಪೋಹಗಳಿಗೆ ಎಡೆ ಮಾಡಿದ್ದರೂ ಇದು ಇವರ ವೈಯುಕ್ತಕ ವಿಚಾರವಾಗಿದೆ. ಇದಕ್ಕೂ ರಾಜ್ಯ ರಾಜಕಾರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ರಾಜ್ಯ ಸಂವಿಧಾನಬದ್ದವಾಗಿ ನಡೆದರೆ ಇವರ ವಾದ ವಿವಾದಗಳ ಪರಿಹಾರವು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ಇವರಿಬ್ಬರೂ ಒಂದಾಗಿ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಪರಸ್ಪರ ತಪ್ಪುಗಳನ್ನು ತಿದ್ದಿಕೊಂಡು ಇನ್ನು ಮುಂದೆ ಇಂತಹಾ ಆಣೆ - ಪ್ರಮಾಣಗಳಿಗೆ ಎಡೆ ಮಾಡುವಂತಹಾ ಹಗರಣಗಳನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿಕೊಳ್ಳುವ ಅಗತ್ಯವಿದೆ.
ಧಮರ್ಾಧಿಕಾರಿಗಳು ಎಲ್ಲಾ ವೈಮನಸ್ಸುಗಳನ್ನು ಮಂಜುನಾಥನ ಸನ್ನಿಧಿಯಲ್ಲೇ ಬಿಟ್ಟು ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಎಂಬ ಬುದ್ದಿಯ ಮಾತುಗಳನ್ನು ಹೇಳುತ್ತಾರೆ. ಅದನ್ನು ಈರ್ವರೂ ಚಾಚೂ ತಪ್ಪದೆ ಪಾಲಿಸುತ್ತಾರೆ ಎಂಬ ಅಪೇಕ್ಷೆ ಮಂಜುನಾಥನನ್ನು ಮೈಮನಗಳಲ್ಲಿ ತುಂಬಿಕೊಂಡ ತುಳುವರದ್ದಾಗಿದೆ.

Tuesday, May 31, 2011

ಎಲ್ಲವೂ ಅಸಲಿ; `ಅಪ್ಪೆ', `ದೈವ' ನಕಲಿ



ನಮ್ಮ ನಗರದ ಪ್ರತಿಷ್ಠಿತ ಜ್ಯೋತಿ ಚಿತ್ರಮಂದಿರದಲ್ಲಿ ಈಗ ಕಿಕ್ಕಿರಿದ ಜನಸಂದಣಿ. ಚಿತ್ರಮಂದಿರದ ಮೂಲಗಳು ಹೇಳುವಂತೆ ಕಳೆದ ವರ್ಷ ಬಂದ ವಿಷ್ಣುವರ್ಧನ್ರವರ ಆಪ್ತರಕ್ಷಕ ಚಿತ್ರದ ಬಳಿಕ ಚಿತ್ರಮಂದಿರದ ಮುಂದಿನ ಸಾಲಿನ ಸೀಟಿನ ಮೇಲೆ ಭಾರ ಬಿದ್ದದ್ದು ಮೊನ್ನೆ ಅಸಲ್ ಚಿತ್ರ ಬಿಡುಗಡೆಯಾದ ನಂತರ. ಟಿವಿ ಮುಂತಾದ ಮನರಂಜನೆಗಳು ವ್ಯಾಪಕವಾಗುವ ಮುನ್ನ ಸಿನಿಮಾ ಮಂದಿರಗಳು ತಮ್ಮ ದೌಲತ್ತನ್ನು ಪ್ರದಶರ್ಿಸುತ್ತಿದ್ದವು. ಟಿಕೇಟಿಗಾಗಿ ಹನುಮಂತನ ಬಾಲದಂತಹಾ ಸಾಲು. ನೂಕು ನುಗ್ಗಾಟ, ಗಲಾಟೆ, ಗಲಭೆಯನ್ನು ನಿಯಂತ್ರಿಸಲು ಪೊಲೀಸರ ಆಗಮನ, ಟಿಕೇಟನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುವ ಬ್ಲ್ಯಾಕ್ಟಿಕೇಟ್ ದಂಧೆ ಇತ್ಯಾದಿಗಳು ಆಗೆಲ್ಲಾ ಸಾಮಾನ್ಯವಾಗುತ್ತಿದ್ದವು. ಬರಬರುತ್ತಾ ನಮ್ಮ ತುಳುನಾಡಿನ ಚಿತ್ರ ಮಂದಿರಗಳಲ್ಲಿ ಹೊರರಾಜ್ಯದ ಪ್ರೇಕ್ಷಕರೇ ಜಾಸ್ತಿಯಾಗತೊಡಗಿದರು. ತುಳು ಮಾತನಾಡುವ ಮಂದಿ ಕನ್ನಡ ಸಿನೆಮಾಗಳ ವೀಕ್ಷಕರಾಗಿ ಹೋಗುವುದು ಬಹಳಷ್ಟು ಕಡಿಮೆಯಾಗತೊಡಗಿತು.
ಈಗ ಜ್ಯೋತಿ ಚಿತ್ರ ಮಂದಿರಕ್ಕೆ ಹೋದರೆ ನಮಗೆ ಆ ದಿನಗಳ ನೆನಪಾಗುತ್ತದೆ. ಎಲ್ಲಿ ನೋಡಿದರೂ ತುಳು ಬಿಟ್ಟು ಬೇರೆ ಭಾಷೆ ಮಾತನಾಡುವವರೇ ಇಲ್ಲ. ಅಂಕುಡೊಂಕು ಸಾಲು, ಪೊಲೀಸರ ಖಾಕಿ ಡ್ರೆಸ್ಸು, ಅಲ್ಲಲ್ಲಿ ನಾಲ್ಕೈದು ಪಟ್ಟು ಹೆಚ್ಚು ದುಡ್ಡಿಗೆ ಟಿಕೇಟ್ ಮಾರಾಟ ಮಾಡುವವರು. ಟಿಕೇಟೆಲ್ಲಾ ಖಾಲಿಯಾಗಿ `ಹೌಸ್ಫುಲ್' ಬೋಡರ್ು ಚಿತ್ರ ಮಂದಿರದ ಬಾಗಿಲಲ್ಲಿ ಕಾಣಿಸಿಕೊಂಡಾಗ ಸಹನೆಗೆಟ್ಟು ಕೂಗಾಡುವ ಗಟ್ಟಿ ಮಾಂಸಖಂಡದ ಹುಡುಗರು. ಬೇಸರದಿಂದ ಚಿತ್ರಮಂದಿರದ ಆವರಣದಿಂದ ಹೊರಗೆ ಬಂದು ತಮ್ಮ ತಮ್ಮ ಪಾಡಿಗೆ ಹೋಗುವ ಮಂದಿ...
ಹೌದು ವಿಜಯಕುಮಾರ್ ಕೊಡಿಯಾಲ್ ಬೈಲ್ರವರ `ಒರಿಯದರ್ೊರಿ ಅಸಲ್' ತುಳು ಚಿತ್ರ ತುಳುನಾಡಿನಲ್ಲೇ ಒಂದು ಇತಿಹಾಸವನ್ನು ಬರೆದಿದೆ. ತುಳುನಾಡಿನಾದ್ಯಂತ ಈ ಚಿತ್ರದ ಪರವಾದ ಒಂದು ಅಲೆಯನ್ನು ನಿಮರ್ಾಣ ಮಾಡಿದೆ. ಈ ಚಿತ್ರವನ್ನು ಒಂದು ಬಾರಿ ನೋಡಬೇಕು ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಈ ಚಿತ್ರವನ್ನು ನೋಡಲೆಂದೇ ದುಬಾಯಿಯಿಂದ, ಮುಂಬಾಯಿಯಿಂದ ಬಂದವರಿದ್ದಾರೆ. ದೂರದ ಊರುಗಳಿಗೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಇನ್ನೂ ಕೂಡಾ ಚಿತ್ರ ನೋಡಲು ಅವಕಾಶ ಸಿಗದವರೂ ಇದ್ದಾರೆ. ಆಧುನಿಕ ಮನರಂಜನೆಗಳು ಸಾಕಷ್ಟು ಇರುವ ಈ ಕಾಲದಲ್ಲಿ ತುಳು ಚಿತ್ರವೊಂದು ಪ್ರೇಕ್ಷಕರನ್ನು ಚಿತ್ರ ಮಂದಿರಕ್ಕೆ ಕೈ ಬೀಸಿ ಕರೆಯುತ್ತಿರುವುದು ಒಂದು ವಿಸ್ಮಯವೇ ಸರಿ.
ತುಳುವರಿಗೆ ಸ್ಯಾಂಡಲ್ವುಡ್, ಬಾಲಿವುಡ್ ಗುಣಮಟ್ಟದ ಚಿತ್ರವೊಂದನ್ನು ನಿಮರ್ಿಸಲು ಸಾಧ್ಯವಿಲ್ಲ ಎಂಬ ಕೀಳರಿಮೆಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ರವರು ಮಂಗಳ ಹಾಡಿದ್ದಾರೆ. ತುಳು ಚಿತ್ರಕ್ಕೆ ಪ್ರೇಕ್ಷಕರು ಸಹಕಾರ ನೀಡುವುದಿಲ್ಲ ಎಂಬುದನ್ನೂ ತುಳುನಾಡಿನ ಪ್ರೇಕ್ಷಕರು ಹುಸಿಗೊಳಿಸಿದ್ದಾರೆ. ತುಳು ಚಿತ್ರರಂಗದ ಅಂಕುಡೊಂಕಿನ ರಸ್ತೆಯ ಅಂತಿಮ ಮೈಲಿಗಲ್ಲು ಇದು. ಮುಂದಿದೆ ನೇರ ಸಮತಟ್ಟಿನ ದಾರಿ.
ಈ ಚಿತ್ರ ಕೇವಲ ಹಾಸ್ಯದ ಕಾರಣದಿಂದಲೇ ಜನರ ಮನವನ್ನು ಸೆಳೆದಿದೆ ಎಂದರೆ ತಪ್ಪಾಗುತ್ತದೆ. ಮಧ್ಯಂತರದ ನಂತರ ಕತೆ ವಿಭಿನ್ನವಾಗಿ ಮೂಡಿ ಬಂದಿದೆ. ನಾಟಕದ ಒರಿಯದರ್ೊರಿ ಅಸಲ್ನಂತೆ ಚಿತ್ರ ಸಾಗುತ್ತದೆ ಎಂದು ಭಾವಿಸಿದವರಿಗೆ ತಾವು ತಪ್ಪಾಗಿ ಭಾವಿಸಿದ್ದೇವೆ ಎಂಬ ಭಾವನೆ ಮೂಡುತ್ತದೆ. ತುಳುನಾಡಿನ ನೆಲ-ಜಲದ ಉಳಿವಿಗಾಗಿ ಅತೀ ಅಗತ್ಯವಾಗಿ ಬೇಕಾದ ಉತ್ತಮ ಸಂದೇಶವೂ ಈ ಚಿತ್ರದಲ್ಲಿ ಅಡಗಿದೆ. ಈ ಚಿತ್ರದ ಕತೆಯನ್ನು ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿ ಕಂಡು ಬರುವ ಒಂದು ಸಾಲಿನ ಕತೆಯಂತೆ ಹೇಳಿಬಿಡುಬಹುದು ಆದರೆ ಈ ಒಂದು ಸಾಲು ಚಿತ್ರಕತೆ ಎಂಬ ಪ್ರಾಣವಾಯುವಿನ ಸುತ್ತ ಹೆಣೆಯಲಾದ ಸುಂದರ ಶರೀರ ಮನಮುಟ್ಟುತ್ತದೆ.
ಹಾಗಾದರೆ ಈ ಚಿತ್ರದಲ್ಲಿ ಋಣಾತ್ಮಕವಾದ ಅಂಶಗಳು ಇಲ್ಲವೇ? ಇದೆ. ಖಂಡಿತವಾಗಿಯೂ ಇದೆ. ಅವುಗಳಲ್ಲಿ ಮುಖ್ಯವಾಗಿ ನಮ್ಮ ಚಿತ್ರಕ್ಕೊಂದು ಅಸಲಿ `ಅಪ್ಪೆ'ಯನ್ನು ಕೊಡಲು ವಿಜಯಣ್ಣ ವಿಫಲರಾಗಿದ್ದಾರೆ. ಖಡಕ್ ತುಳು ಮಾತನಾಡಿ ಮನಗೆಲ್ಲಬೇಕಾಗಿದ್ದ `ಅಪ್ಪೆ'ಯನ್ನು ಮುಂಬಾಯಿಯಿಂದ ಕರೆತಂದಂತಾಗಿದೆ. ಇಲ್ಲಿ ಕಾಪರ್ೋರೇಟರ್ ಕಾಂತಪ್ಪಣ್ಣನ ಹೆಂಡತಿ ಸ್ಟೈಲಾಗಿ ತುಳುವನ್ನು ಎಳೆದೆಳೆದು ಮಾತನಾಡುವುದನ್ನು ಸಹಿಸಿಕೊಳ್ಳಬಹುದಾಗಿದೆ. ನಾಯಕಿಯೂ ಆಧುನಿಕತೆಯ ಪ್ರಭಾವದಿಂದ ಮಾಡನರ್್ ತುಳು ಮಾತನಾಡುವುದನ್ನು ಒಪ್ಪಿಕೊಳ್ಳಬಹುದಾಗಿದೆ. ಆದರೆ ತುಳುನಾಡಿನ ಅಪ್ಪೆಗೆ ಸರಿಯಾಗಿ ತುಳು ಮಾತನಾಡಲು ಬಾರದೇ ಇರುವುದು ಒಂದು ಪ್ರಮುಖ ಕಪ್ಪು ಚುಕ್ಕೆಯಾಗಿದೆ. ಇದು ಒಂದು ಋಣಾತ್ಮಕ ಅಂಶವಾದರೆ ಇನ್ನೊಂದು ತುಳುನಾಡಿನ ಸಂಸ್ಕೃತಿಯ ದೃಷ್ಟಿಯಿಂದ ಬಹಳ ಮುಖ್ಯವೂ ಇನ್ನು ಮುಂದೆ ಸಿನಿಮಾ, ದೃಷ್ಯ ಮಾಧ್ಯಮಗಳಲ್ಲಿ ನಮ್ಮ ಸಂಸ್ಕೃತಿಯನ್ನು ದಾಖಲಿಸುವಾಗ ಬಹಳಷ್ಟು ಜಾಗರೂಕತೆ ವಹಿಸಬೇಕಾದ ವಿಚಾರವೂ ಆಗಿದೆ. ಭೂತಾರಾಧನೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಸಿನಿಮಾದಲ್ಲಿ ತೋರಿಸುವಾಗ ಆಭಾಸವಾಗಿದೆ. ದೈವಪಾತ್ರಿಯ ಧ್ವನಿಯಂತೂ ಅಪಹಾಸ್ಯಕ್ಕೊಳಗಾದಂತಾಗಿದೆ. ನಾಟಕದಲ್ಲಿ ಇಂತಹುಗಳನ್ನು ಸಹಿಸಿಕೊಳ್ಳಬಹುದಾದರೂ ಸಿನಿಮಾದಲ್ಲಿ ಸಾಧ್ಯವಿಲ್ಲ. ಈ ದೃಷ್ಯವನ್ನು ಗಂಭೀರತೆಯೊಂದಿಗೆ ಅಳವಡಿಸಿಕೊಂಡಿದ್ದರೆ ಬಹುಶಃ ಇದೊಂದು ಚಿನ್ನದ ಗರಿಯಾಗುತ್ತಿತ್ತು. ಇಲ್ಲಿ ಬಸಪ್ಪಣ್ಣ ಮದ್ಯಪಾನ ವ್ಯಸನಿಯ ಸಂಕೇತವಾಗಿದ್ದರೆ, ದೈವ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರಬೇಕಾಗಿತ್ತು.
ಇವೆರಡಲು ಋಣಾತ್ಮಕ ಅಂಶಗಳನ್ನು ಬಿಟ್ಟರೆ ಉಳಿದ ಯಾವುದೇ ಹೇಳಿಕೊಳ್ಳುವಂತಹಾ ಹಿನ್ನಡೆಗಳು ಅಸಲಿಗಿಲ್ಲ. ಖಂಡಿತವಾಗಿಯೂ ಈ ಚಿತ್ರ ಎಲ್ಲಾ ರೀತಿಯಿಂದಲೂ ಸೂಪರ್ರಾಗಿದೆ. ಪ್ರತಿಯೋರ್ವರು ಸಂಸಾರ ಸಮೇತವಾಗಿ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವುದು ತುಳುವರ ಕರ್ತವ್ಯವಾಗಿದೆ.

Monday, May 30, 2011

ತುಳುವರ ಪವಿತ್ರ `ಐನ್ ಪಣವು'ಗೆ ವಿದಾಯ



ನಾಲ್ಕಾಣೆಯ ಚಲಾ ವಣೆಯನ್ನು ಹಿಂತೆಗತದಿಂದ ತುಳುವರ `ನಾಲ್ಕಾಣೆ' ಕಾಣೆಯಾಗಿದೆ. ಈ ನಾಲ್ಕಾಣೆ ಇಲ್ಲದೇ ಹೋದ ಕಾರಣದಿಂದ ತುಳುವರು ತಾವು ಧಾಮರ್ಿಕ ಕಾರ್ಯಕ್ರಮಗಳಲ್ಲಿ ಅತಿ ಶ್ರದ್ದೆಯಿಂದ ಚಲಾಯಿಸುತ್ತಿದ್ದ `ಐನ್ ಪಣವಿ'ಗೆ ವಿದಾಯ ಹೇಳಬೇಕಾಗಿ ಬಂದಿದೆ.
ಒಂದು ಆಣೆ ಎಂದರೆ ಆರೂ ಕಾಲು ಪೈಸೆ ಎಂದು ಲೆಕ್ಕ ಹಾಕುತ್ತಿದ್ದ ತುಳುವರು ಇಂತಹಾ ನಾಲ್ಕು ಆಣೆಯನ್ನು ಸೇರಿಸಿ `ನಾಲ್ಕಾಣೆ' ಅಂದರೆ ಇಪ್ಪತ್ತೈದು ಪೈಸೆ ಎಂದು ಹೇಳುತ್ತಿದ್ದರು. ಇದೇ ರೀತಿ `ಎಣ್ಮಾಣೆ' ಅಂದರೆ ಐವತ್ತು ಪೈಸೆ ಮತ್ತು `ಪದ್ರಡಾಣೆ' ಅಂದರೆ ಎಪ್ಪತ್ತೈದು ಪೈಸೆ ಎಂದು ಹೇಳುತ್ತಿದ್ದರು ಒಂದು ರೂಪಾಯಿಯ ನಂತರ ಬರುವುದೇ `ಐನ್ ಪಣವು' ಅಂದರೆ ಐದು ನಾಲ್ಕಾಣೆಗಳು ಸೇರಿದ ಒಂದೂಕಾಲು ರೂಪಾಯಿ ತುಳುವರ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಅತೀ ಪವಿತ್ರ.
ತುಳುನಾಡಿನಲ್ಲಿ ಯಾವುದೇ ಧಾಮರ್ಿಕ ಕಾರ್ಯಕ್ರಮಗಳಲ್ಲೂ ಐನ್ ಪಣವು ಕಾಣಿಕೆಯನ್ನು ಇಡಲಾಗುತ್ತದೆ. ಒಂದು ಕಾಲದಲ್ಲಿ ಇದು ಗರಿಷ್ಠವಾಗಿದ್ದು ಈ ಕಾಲದಲ್ಲಿ ಇದು ಕನಿಷ್ಠವಾಗಿರಬಹುದು. ಆದರೆ ಈ ಐನ್ಪಣವು ಧಾಮರ್ಿಕವಾಗಿ ಸ್ವೀಕೃತವಾಗಿತ್ತು. ಧಾಮರ್ಿಕ ಕಾರ್ಯಕ್ರಮದ ಕೊನೆಯ ಭಾಗವಾಗಿ ಬ್ರಹ್ಮಾರ್ಪಣೆ `ಐನ್ ಪಣವಿ'ಗೆ ಹೂ ನೀರು ಹಾಕಿ ಬಿಡಬೇಕೆಂಬ ನಿಯಮವಿತ್ತು. ಇತ್ತೀಚೆಗೆ ಇದು ಐದು ಹತ್ತು ರೂಪಾಯಿಗಳಿಗೇರಿದ್ದರೂ ಒಂದೂ ಕಾಲು ರೂಪಾಯಿಯೇ ಪವಿತ್ರವಾದದ್ದು ಎಂಬ ಭಾವನೆ ಇತ್ತು.
ಪುರೋಹಿತರಿಗೆ ಕಾಣಿಕೆ, ತಾಂಬೂಲ ಇತ್ಯಾದಿಗಳನ್ನು ಕೊಡುವಾಗಲೂ ಎಷ್ಟೇ ದೊಡ್ಡ ಸಂಭಾವನೆಯ ನೋಟುಗಳನ್ನು ಇಟ್ಟರೂ ಅದರ ಜತೆಗೆ `ಐನ್ಪಣವು' ಇಟ್ಟರೇನೇ ಅದು ಸಾರ್ಥಕ ಎಂದು ಭಾವಿಸಲಾಗುತ್ತಿತ್ತು. ಡೊನೇಶನ್ ಇತ್ಯಾದಿಗಳನ್ನು ಕೊಡುವಾಗ ಕೊನೆಯಲ್ಲಿ ಸೊನ್ನೆ ಬರಬಾರದು ಎಂದು ಒಂದು ರೂಪಾಯಿ ಹೆಚ್ಚಾಗಿ ಕೊಡುವ ಕ್ರಮವೂ ಇದೇ ಆಧಾರದಲ್ಲಿ ಬಂದಿರಬೇಕು. ಒಂದು ಕಾಲು ಅಂದರೆ ಒಂದು ರೂಪಾಯಿ ಇಪ್ಪತೈದು ಪೈಸೆ ಅಂದರೆ ಕೊನೆಯ ಅಂಕೆ ಐದು ಆಗಿರುವುದರಿಂದಲೂ ಇದು ಮಂಗಲಕರವಾದದ್ದು ಎಂದು ಭಾವಿಸಲಾಗುತ್ತಿತ್ತು.
ಇನ್ನು ಮಂದಕ್ಕೆ ಮಂಗಲಕರ ಎಂದು ಭಾವಿಸಲಾಗಿದ್ದ ಈ ಸಂಖ್ಯೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ನಾಲ್ಕಾಣೆಯ ನಾಣ್ಯ ಮಾಯವಾಗಿಬಿಟ್ಟಿದೆ. ಜನರು ಆಥರ್ಿಕವಾಗಿ ಅಪಾರವಾದ ಅಭಿವೃದ್ಧಿ ಹೊಂದಿದ ಪರಿಣಾಮ ಬಹುಮುಖ್ಯವಾದ ಧಾಮರ್ಿಕ ಭಾವನೆಯೊಂದಕ್ಕೆ ಧಕ್ಕೆ ಬಂದೊದಗಿದೆ.
ಹಿಂದಿನ ಕಾಲದ ರುಯಿ, ಮುಕ್ಕಾಲು ಇತ್ಯಾದಿ ಲೆಕ್ಕದ ವಿಚಾರಗಳನ್ನು ಈಗ ಅರುವತ್ತು ವರ್ಷ ದಾಟಿದವರ ಬಾಯಲ್ಲಿ ಕೇಳಬಹುದಾಗಿದೆ. ಈಗ ಯುವಾವಸ್ಥೆಯನ್ನು ದಾಟುತ್ತಿರುವವರ ಬಾಲ್ಯದಲ್ಲಿ ರುಯಿ, ಮುಕ್ಕಾಲುಗಳು ಹಾಸ್ಯದ ಮತ್ತು ತಮಾಷೆ ಮಾಡುವ ನಾಣ್ಯಗಳಾಗಿದ್ದವು. ಇವರ ಬಾಲ್ಯ ಕಾಲದಲ್ಲಿ ಪೈಸೆಗಳದ್ದೇ ಕಾರುಬಾರು. ಇಂತಹಾ ಒಂದು ಪೈಸೆ, ಮೂರು ಪೈಸೆ, ಐದು ಪೈಸೆಗಳ ಚಲಾವಣೆ ಹಿಂತೆಗೆದುಕೊಳ್ಳುತ್ತದೆ ಎಂದು ಆ ಕಾಲದಲ್ಲಿ ಸುದ್ದಿಯಾದಾಗ ಈ ಪೈಸೆಗಳೆಲ್ಲಾ ಮಕ್ಕಳ ಕೈಗೆ ಸೇರಿ ಐಸ್ ಕ್ಯಾಂಡಿಯವನ ಡಬ್ಬ ಸೇರಿತ್ತು. ಹತ್ತು ಪೈಸೆ ಚಲಾವಣೆ ನಿಂತು ಹೋದದ್ದು ಇತ್ತೀಚಿನ ದಿನಗಳಲ್ಲಿ. ಹತ್ತು ಪೈಸೆ ಮತ್ತು ಅದರ ಕೆಳಗಿನ ಮೌಲ್ಯದ ನಾಣ್ಯಗಳು ನಾಣ್ಯ ಸಂಗ್ರಾಹಕರ ಬಳಿಯಲ್ಲಿ ನಾವೀಗ ಕಾಣಬಹುದಾಗಿದೆ. ನಾಲ್ಕಾಣೆಯ ಪಾವಲಿಗಳೂ ಅದೇ ದಾರಿಯನ್ನು ಹಿಡಿದಿದೆ. ಇನ್ನು ಮುಂದಿನ ಸರದಿ ಎಂಟಾಣೆ ಅಂದರೆ ಐವತ್ತು ಪೈಸೆಯದ್ದು. ಆದರೆ ಈ ನಾಣ್ಯ ನಾಲ್ಕಾಣೆಯಂತೆ ಧಾಮರ್ಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಾಮ ಬೀರದು.