Saturday, December 19, 2009

ತಿತ್ತೀರಿ ಬಿತ್ಲ್ ಮಜಲ್ದ ಪಂತಿ



ಫಲವತ್ತಾದ ತಿತ್ತೀರಿ ಬಿತ್ಲ್ ಮಜಲು ಗದ್ದೆಯಲ್ಲಿ ಕಳೆಹುಲ್ಲು ಬೆಳೆದಿದೆ ಎಂಬ ದೂರು ಗುತ್ತಿನ ಯಜಮಾನನಿಗೆ ಬಂದಿತು. ಆತ ಅದು ಹೇಗಾಯಿತು? ಎಂದು ವಿಚಾರಣೆ ಆರಂಭಿಸಿದ ಪಾಡ್ದನ ಹೀಗಿದೆ.
ತಿತ್ತೀರಿ ಬಿತ್ಲ್ ಮಜಲ್ಡ್ ಪಂತಿ ಎಕರ್್ದ್ಂಡ್ಗೇ.
ದಾಯೆ ಎಮರ್ೆ ದಾಯೆ ಎಮರ್ೆ ಪಂತಿ ಮೇಯಿಜ?
ಇರೆ ಚಾಕಿರ್ದಾಯೆ ಬಲ್ಲ್ಬುಡ್ಜೆಡ ಯಾನ್ ದಾನೊಡು?
ದಾಯೆ ಚಾಕಿರ್ದಾಯ ದಾಯೆ ಚಾಕಿರ್ದಾಯ
ಬಲ್ಲ್ ಬುಡ್ತುಜಾ?
ಇರೆ ಯಜಮಾನ್ದಿ ತೆಲಿ ಮೈತ್ಜೆರ್ಡ ಯಾನ್ ದಾನೋಡು?
ದಾಯೆ ಪೊಣ್ಣೆ, ದಾಯೆ ಪೊಣ್ಣೆ ತೆಲಿ ಮೈತ್ಜಾ?
ಎನ್ನ ಕೈಸಟ್ಟಿ, ಕುಡುಪು ಉದಲ್ ಪತ್ತ್ದ್ಂಡೇ
ಯಾನ್ ದಾನೊಡು?
ದಾಯೆ ಕೋರಿ ದಾಯೆ ಕೋರಿ ಉದಲ್ ಪೆಜ್ಜ್ಜಾ?
ಎನ್ನ ಕೊಕ್ಕು ಬಡ್ಡ್ ಆತ್ಂಡೆ ಯಾನ್ ದಾನೋಡು?
ದಾಯೆ ಆಚಾರಿ, ದಾಯೆ ಆಚಾರಿ ಕೊಕ್ಕು ಕೆತ್ತ್ಜಾ?
ಎನ್ನ ಉಳಿ, ಸುತ್ತೆ ಕಲ್ವೆರ್ ಕೊನೊತೆರೆ
ಯಾನ್ ದಾನೋಡು?
ದಾಯೆ ನಾಯಿ ದಾಯೆ ನಾಯಿ ಕಲ್ಪನ್ ಪತ್ತ್ಜಾ?
ಇರೆ ಒಟ್ಟುಗು ಬೋಂಟೆಗ್ ಬೈದೆನೆ
ಯಾನ್ ದಾನೋಡು?
ತುಳು ಕವಿಯೊಬ್ಬ ರಚಿಸಿದ ಈ ಪಾಡ್ದನವನ್ನು ಬಾಲ್ಯದಲ್ಲಿ ಕೇಳಿದ, ಹಾಡಿದ ನೆನಪಿನಿಂದ ಇಲ್ಲಿ ನೀಡಲಾಗಿದೆ. ಈ ಪಾಡ್ದನದ ಪ್ರಶ್ನೆಗಳ ಸರಮಾಲೆ ಅಪಾರವಾದ ಅರ್ಥವನ್ನು ನೀಡುತ್ತದೆ.
ಹುಲ್ಲು ಮೇಯುವುದು ಎಮ್ಮೆಯ ಕೆಲಸ ಯಾಕೆ ಮೇಯಲಿಲ್ಲ? ಎಂದು ಯಜಮಾನ ಎಮ್ಮೆಯನ್ನು ಕೇಳಿದಾಗ ಕೆಲಸದಾಳು ಹಗ್ಗ ಬಿಡಲಿಲ್ಲ ಎನ್ನುತ್ತದೆ. ಹಗ್ಗ ಯಾಕೆ ಬಿಡಲಿಲ್ಲ? ಎಂದಾಗ ಕೆಲಸದವ ಮನೆಯೊಡತಿ ತೆಲಿನೀರು ಕೊಡಲಿಲ್ಲ ಎನ್ನುತ್ತಾನೆ. ತೆಲಿನೀರು ಯಾಕೆ ಕೊಡಲಿಲ್ಲ? ಎಂದಾಗ ಅನ್ನ ಬಸಿಯಲು ಉಪಯೋಗಿಸುವ ಮರದ `ಕೈಸಟ್ಟಿ' ಮತ್ತು ಬೀಳಲಿನ `ಕುಡುಪು' ಗೆದ್ದಲು ತಿಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಗೆದ್ದಲನ್ನು ಯಾಕೆ ಹೆಕ್ಕಿ ತಿನ್ನಲಿಲ್ಲ? ಎಂದು ಕೋಳಿಯನ್ನು ಕೇಳಿದಾಗ ಕೋಳಿ ನನ್ನ ಕೊಕ್ಕು ಹರಿತವಿಲ್ಲ ಎಂದು ಬಿಂಕವಾಡುತ್ತದೆ. ಕೊಕ್ಕನ್ನು ಬಡಗಿ ಯಾಕೆ ಕೆತ್ತಿ ಹರಿತ ಮಾಡಲಿಲ್ಲ? ಎಂದು ಕೇಳಿದಾಗ ನನ್ನ ಉಳಿ, ಸುತ್ತಿಗೆ ಕಳ್ಳರು ಕದ್ದುಕೊಂಡುಹೋಗಿದ್ದಾರೆ ಎಂದು ದೂರು ಕೊಡುತ್ತಾನೆ. ಕಳ್ಳರನ್ನು ಯಾಕೆ ಹಿಡಿಯಲಿಲ್ಲ? ಎಂದು ನಾಯಿಯನ್ನು ಕೇಳಿದಾಗ ರಾತ್ರಿ ಹಗಲು ತಮ್ಮೊಂದಿಗೆ ಬೇಟೆಗೆ ಬಂದಿದ್ದರಿಂದ ನಾನೇನು ಮಾಡಲು ಸಾಧ್ಯ? ಎಂದು ಕೇಳುತ್ತದೆ. ಈಗ ಗುತ್ತಿನ ಯಜಮಾನನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತಾನು ಕರ್ತವ್ಯ ಮರೆತು ರಾತ್ರಿ ಹಗಲು ಬೇಟೆಯ ಮೋಜಿನಲ್ಲಿ ಕಾಲ ಕಳೆಯುತ್ತಿರುವ ಬಗ್ಗೆ ಆತನಿಗೆ ನಾಯಿ ಎಚ್ಚರಿಸುತ್ತದೆ.
ನಮ್ಮ ತುಳುನಾಡಿನ ಕತೆಯೂ ಇದಕ್ಕಿಂತೆ ಒಂದು ಹೆಜ್ಜೆ ಮುಂದೆ ಹೋಗಿದೆ. ತಿತ್ತೀರಿ ಬಿತ್ತಿಲಿನ ಹುಲ್ಲನ್ನು ತೆಗೆದು ಫಸಲು ತೆಗೆಯಲು ಯಜಮಾನ ಮುಂದೆ ಯತ್ನಿಸಿದರೂ. ತುಳುನಾಡಿನ ಮಜಲು ಗದ್ದೆಯ ತುಂಬಾ ಕಳೆ ಬೆಳೆದುದನ್ನು ಕಿತ್ತು ಹಾಕಲು ನಾವು ಎಷ್ಟು ಪ್ರಯತ್ನಿಸಿದ್ದೇವೆ ಎಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ.
ಈ ಪಾಡ್ದನದ ಕಾಲದಲ್ಲಿ ಬೇಟೆ ಎಂಬುದು ಮೋಜು ಮಜಾ ಮಾಡುವ ಒಂದು ಸಾಧನವಾಗಿತ್ತು. ಯಜಮಾನ ಕೇವಲ ಬೇಟೆಯ ವ್ಯಸನದಿಂದ ಕರ್ತವ್ಯ ಮರೆತಿದ್ದರಿಂದ ಗುತ್ತಿನಲ್ಲಿ ಹಲವಾರು ಅನಾಹುತಗಳಾದವು. ಇದರ ಅರಿವು ಆತನಿಗೆ ಬಂದಾಗ ಅತ ಎಲ್ಲರನ್ನು ವಿಚಾರಿಸತೊಡಗಿದ ಎಲ್ಲರೂ ಒಂದೊಂದು ಕಾರಣ ಹೇಳಿ ನುಣಿಚಿಕೊಂಡರು. ತಪ್ಪು ನನ್ನದಲ್ಲ ಎನ್ನುತ್ತಾ ಇನ್ನೊಬ್ಬನ ಮೇಲೆ ಹಾಕತೊಡಗಿದರು. ಕೊನೆಗೆ ತಪ್ಪು ಎಂಬ ಮಾಲೆ ಗುತ್ತಿನ ಯಜಮಾಜನ ಕುತ್ತಿಗೆಯನ್ನೇ ಅಲಂಕರಿಸಿಬಿಟ್ಟಿತು!
ಇದು ಒಂದು ಗುತ್ತಿನ ಮನೆಯ ಕತೆಯಾಯಿತು. ಹೆಚ್ಚಿನ ಸಂಘ, ಸಂಸ್ಥೆಗಳು, ವ್ಯವಹಾರ ಕೇಂದ್ರಗಳಿಗೂ ಈ ಪಾಡ್ದನ ಚೆನ್ನಾಗಿ ಒಪ್ಪುತ್ತದೆ. ತಪ್ಪು ಮಾಡುತ್ತಿದ್ದೇವೆ ಎಂದು ಅರಿವಿಗೆ ಬಂದರೂ ತಮ್ಮ ಸ್ವಾರ್ಥಕ್ಕಾಗಿ ತಪ್ಪನ್ನು ಅಪ್ಪಿಕೊಂಡು ಪತನದತ್ತ ಸಾಗುವ ಕಾಯಕಕ್ಕೆ ಯಾರೂ ಏನೂ ಹೇಳುವಂತಿಲ್ಲ. ತುಳುನಾಡಿನ ಸಂಸ್ಕೃತಿ ಹಾಳಾಗಿದೆ, ಹಾಳಾಗುತ್ತಿದೆ ಎಂದು ಹೇಳುವಲ್ಲಿಯೂ ಈ ಪಾಡ್ದನ ಸಕಾಲಿಕವಾಗಿ ಅನ್ವಯಿಸುತ್ತದೆ.
ತುಳುನಾಡಿನ ಜನತೆ ಸಂಸ್ಕೃತಿ ಮರೆತು ಪರ ಸಂಸ್ಕೃತಿಯನ್ನು ಅನುಸರಿಸಿ ದಿನಕ್ಕೊಂದು ರೀತಿಯ ಮೋಜಿನಲ್ಲಿ ಕಾಲ ಕಳೆಯುತ್ತಿರುವಾಗ ಅದು ತಪ್ಪು ಎಂಬ ಅರಿವು ಎಲ್ಲರಿಗೂ ಬರುತ್ತಿದೆ. ಆದರೆ ಇನ್ನೊಬ್ಬನನ್ನು ತೋರಿಸುತ್ತಾ ಹಾಗಾಯಿತು, ಹೀಗಾಯಿತು ಎನ್ನುತ್ತಾ ತಪ್ಪು ಮಾಡುತ್ತ, ಅನುಕರಣೆ ಮಾಡುತ್ತಲೇ ಸಾಗುತ್ತಿದ್ದೇವೆ.
ಹೇಳಿ ಕೇಳಿ ಈಗ ನಾವು ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದ್ದೇವೆ. ನಾವೇ ಪ್ರಭುಗಳಾಗಿದ್ದೇವೆ. ತುಳು ಸಂಸ್ಕೃತಿ ಹಾಳಾಗಿದೆ ಎಂದು ನಾವೆಷ್ಟು ಹೇಳಿಕೊಂಡು, ಅಸಮಾಧಾನ, ಕೋಪ, ಬಿಂಕ, ದರ್ಪ, ಅಸಹಾಯಕತೆ ವ್ಯಕ್ತಪಡಿಸಿದರೂ ಹಾಳುಮಾಡಿದ ಪಾಪ ನಮ್ಮ ಬೆನ್ನ ಹಿಂದೇ ನೆರಳಿನಂತೆ ಹಿಂಬಾಲಿಸುತ್ತಿದೆ!

No comments:

Post a Comment