Saturday, December 19, 2009

ನಾವು-ನಮ್ಮದರ ಬಗ್ಗೆ ಆರೋಗ್ಯಕರ ಸಂಕುಚಿತತೆ ಬೇಕು



ಸಂಕುಚಿತತೆ ಎಂಬುದು ಮಾನಸಿಕ ವ್ಯಾಧಿ ಎಂಬುದು ಎಲ್ಲರೂ ಒಪ್ಪುವಂತದ್ದೇ. ಸಂಕುಚಿತತೆ ತನ್ನ ತನವನ್ನು ಉಳಿಸಿಕೊಳ್ಳುವಲ್ಲಿಯೂ ನೆರವಾಗುತ್ತದೆ. ಆರೋಗ್ಯಕರವಾದ ಸಂಕುಚಿತತೆ ಇಲ್ಲದೇ ಇದ್ದಲ್ಲಿ ನಾವು ನಮ್ಮನ್ನೇ ಕಳೆದುಕೊಂಡು ಬಿಡುವ ಅಪಾಯವಿದೆ. ತುಳು ಭಾಷೆ ಮತ್ತು ನಾಡಿನ ಬಗ್ಗೆ ಆರೋಗ್ಯಕರವಾದ ಸಂಕುಚಿತತೆ ಇಲ್ಲದೇ ಇದ್ದ ಕಾರಣದಿಂದಲೇ ಇದು ತುಳುನಾಡಿಗೆ, ತುಳು ಭಾಷೆಗೆ ದುರ್ಗತಿ ಒದಗಿ ಬಂದಿದೆ ಎಂದರೂ ತಪ್ಪಿಲ್ಲ. ಇದರಿಂದಾಗಿ ತುಳುವನೊಬ್ಬ ತುಳು ಭಾಷೆ, ಸಂಸ್ಕೃತಿ, ನಾಡಿಗಾಗಿ ಮಾತೆತ್ತಿದರೆ ಅದು ಸಂಕುಚಿತ ಮನೋಭಾವನೆ ಎಂದು ಕೆಲವರು ಗುರುತಿಸುವಲ್ಲಿಯವರೆಗೆ ಬಂದು ಮುಟ್ಟಿದೆ.
ಜಗತ್ತಿನ ಇತರ ಭಾಷೆಗಳಿಗೆ ಹೋಲಿಸಿದಲ್ಲಿ ತುಳುವಿಗೆ ಯಾವ ಕೊರತೆಯೂ ಇಲ್ಲ. ಶತಮಾನಗಳ ಇತಿಹಾಸ, ಸ್ವಂತವಾದ ಲಿಪಿ, ಕಾವ್ಯ, ಮುಂತಾದವುಗಳು ತುಳು ಭಾಷೆಗಿದೆ. ವಿದೇಶಿ ಪ್ರವಾಸಿಗರು ಕೂಡಾ ತುಳು ಭಾಷೆಯನ್ನು ಗುರುತಿಸಿದ್ದಾರೆ. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಅದು ಯಾವ ಕಾರಣದಿಂದಲೋ ತುಳು ಎಂಬುದು ಗುರುತಿಸಲ್ಪಡಲೇ ಇಲ್ಲ. ಈ ಕಾರಣದಿಂದಾಗಿಯೇ ನಮ್ಮ ರಾಜಕಾರಣಿಗಳಲ್ಲಿ ತುಳು ಪರವಾಗಿ ಮಾತನಾಡುವುದು, ಹೋರಾಡುವುದು, ಸಂಕುಚಿತತೆ ಎಂಬ ಭಾವನೆ ಬಲವಾಗಿ ಬೇರೂರಿ ಹೋಯಿತು. ಕನ್ನಡ ಆಡಳಿತ ಭಾಷೆಯಾಗಿರುವಾಗ ನಾವು ತುಳುವಿಗಾಗಿ ಒಂದು ಮನವಿ ಸಲ್ಲಿಸಿದರೆ ಅದರಿಂದ ತಾನು ಪ್ರತ್ಯೇಕತೆಯ ವಿಷಬೀಜವನ್ನು ಬಿತ್ತುತ್ತಿದ್ದೇನೆ ಎಂದು ಭಾವಿಸಿ ತನ್ನ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂಬ ಭಾವನೆಯಿಂದ ತುಳು ಅನಾಥವಾಗಿ ಹೋಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಮೊನ್ನೆ ನಡೆದ ತುಳು ಸಮ್ಮೇಳನದಲ್ಲಿ ನಡೆದ ವಿಚಾರದ ಮಂಥನದಲ್ಲಿ ಈ ಎಲ್ಲಾ ವಿಷಯಗಳು ಸಮಗ್ರ ತುಳುವರಿಗೆ ತಿಳಿದು ಬಂದವು. ತುಳುವಿಗೊಂದು ಮಾನ್ಯತೆ ಕೊಡುವಲ್ಲಿ ರಾಜಕಾರಣಿಗಳು ನೀಡುತ್ತಿರುವ ಕುಂಟು ನೆಪಗಳೇನಿದೆಯೋ ಅದರ ಸತ್ಯಾಸತ್ಯತೆಗಳು ಏನು ಎಂಬುದನ್ನು ಬಿಚ್ಚಿ ನೋಡುವ ಕೆಲಸ ನಡೆಯಿತು. ತುಳುವಿಗೆ ಲಿಪಿ ಇಲ್ಲ ಎಂಬ ನೆಪ ತುಳುವಿಗೆ ಮಾನ್ಯತೆ ನೀಡುವಲ್ಲಿ ವಿಫಲವಾಗಿದೆ ಎಂಬು ವಿಚಾರ ಸರ್ವಥಾ ಸರಿಯಲ್ಲ. ಇಂಗ್ಲಿಷ್ಗೂ ಸ್ವಂತ ಲಿಪಿ ಇಲ್ಲ. ರೋಮನ್ ಲಿಪಿಯಲ್ಲಿ ಅದನ್ನು ಬರೆಯಲಾಗುತ್ತದೆ, ಮಾನ್ಯತೆ ಪಡೆದ ಕೊಂಕಣಿಗೂ ಲಿಪಿ ಇಲ್ಲ ಅದರ ಲಿಪಿಯ ನಿಮರ್ಾಣದ ತಯಾರಿ ನಡೆಯುತ್ತಿದೆ ಎಂಬ ನಗ್ನ ಸತ್ಯ ಎಲ್ಲರೆದುರೂ ತೆರೆದುಕೊಂಡಿತು. ಹಾಗಾದರೆ ಸ್ವಂತ ಲಿಪಿ ಇರುವ ತುಳು ಇವೆಲ್ಲಾ ಭಾಷೆಗಳನ್ನು ಮೀರಿ ನಿಲ್ಲುವುದಿಲ್ಲವೇ? ಆದರೆ ಇದನ್ನು ವ್ಯವಸ್ಥಿತವಾಗಿ ಅರ್ಥಮಾಡಿಸುವಲ್ಲಿ, ಮಾಡಿಕೊಳ್ಳುವಲ್ಲಿ ನಮ್ಮ ರಾಜಕಾರಣಿಗಳು ಸೋತು ಹೋಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ತುಳುನಾಡಿನ ರಾಜಕಾರಣಿಗಳೆಲ್ಲರೂ ತುಳು ಸಮ್ಮೇಳನದ ಒಂದೇ ವೇದಿಕೆಯಡಿ ಬಂದು ತುಳುವಿಗೊಂದು ಮಾನ್ಯತೆ ಕೊಡಿಸುವಲ್ಲಿ ಯಾವ ತೊಂದರೆಯೂ ಉದ್ಭವಿಸದು ಎಂದು ಘೋಷಿಸಿದ್ದು ತುಳುವಿಗಿರುವ ತೊಡಕನ್ನು ಒದ್ದು ಓಡಿಸಿದಂತೇ ಆಗಿದೆ.
ತುಳುವನ್ನು ಯಾರೂ ಇಷ್ಟಪಡುವುದಿಲ್ಲ. ತುಳುವರು ಭಾಷೆಯ, ನಾಡಿನ ಬಗ್ಗೆ ಸೋಮಾರಿಗಳು ಎಂಬು ಮಾತನ್ನು ಈ ಬಾರಿಯ ತುಳು ಸಮ್ಮೇಳನ ಸಂಪೂರ್ಣವಾಗಿ ನಿರಾಕರಿಸಿವೆ. ಮೂರು ಲಕ್ಷ ಜನರು ಸೇರಬಹುದು ಎಂಬ ನಿರೀಕ್ಷೆಯನ್ನು ಹುಸಿಮಾಡಿ ಹದಿಮೂರು ಲಕ್ಷ ಜನರ ಸೇರಿ. ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟದ್ದು ತುಳುವರ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಈ ಉತ್ಸಾಹಕ್ಕೆ ರಾಜಕೀಯ ರಹಿತವಾದ ನೇತೃತ್ವವೊಂದು ಸಿಕ್ಕಿದರೆ ಖಂಡಿತವಾಗಿಯೂ `ತುಳುಅಪ್ಪೆ' ಸವರ್ಾಲಂಕೃತ ಭೂಷಿತೆಯಾಗಿ ಮೆರೆದಾಡುತ್ತಾಳೆ.

No comments:

Post a Comment